ಹೊಸದಿಗಂತ ವರದಿ, ಸೋಮವಾರಪೇಟೆ:
ತಾಯ್ತನ ಹೆಣ್ಣಿಗೆ ದೈವ ಕೊಟ್ಟ ಮಹಾನ್ ವರ. ಒಂಬತ್ತು ತಿಂಗಳು ಹೊತ್ತು, ಹೆತ್ತು ಸಂತೃಪ್ತಿ ಪಡೆಯುವ ಹೆಣ್ಣು ಜೀವ ಒಮ್ಮೊಮ್ಮೆ ತನ್ನಿಚ್ಚೆಗೆ ವಿರುದ್ಧವಾಗಿಯೋ ಅಥವಾ ಬಲಾತ್ಕಾರಕ್ಕೋ ಜನಿಸಿದ ಕರುಳ ಕುಡಿಯನ್ನೇ ಎಸೆಯುವ, ಕೊಲ್ಲುವ ಮೂಲಕ ತನ್ನ ಕಠೋರ ಹೃದಯವನ್ನೂ ತೋರಿಸಿಬಿಡುತ್ತದೆ.
ಅಂತಹ ಘಟನೆಯೊಂದು ಸೋಮವಾರಪೇಟೆಯ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ. ಯಾರೋ ಒಬ್ಬ ಮಹಾತಾಯಿ ಕೇವಲ ಎರಡು ದಿನದ ಹಿಂದಷ್ಟೆ ಜನಿಸಿದ ಗಂಡು ಮಗುವಿನ ಮೃತದೇಹವನ್ನು ಕಾಫಿ ತೋಟದೊಳಗೆ ಬಿಟ್ಟು ಹೊರಟಿದ್ದಾಳೆ.
ಹುಟ್ಟಿದಾಗಿನ ಹೊಕ್ಕಳ ಬಳ್ಳಿಯನ್ನೂ ಸರಿಯಾಗಿ ಕತ್ತರಿಸದೆ ಹೆತ್ತಾಕೆ ತೋಟದೊಳಗೆ ಮಗುವನ್ನು ಬಿಟ್ಟಿದ್ದಾಳೆ. ವಿಚಾರ ತಿಳಿದ ಪೊಲೀಸರು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ