ವೈಕುಂಠ ಏಕಾದಶಿ: ತಿರುಪತಿಯಲ್ಲಿ ಡಿ.27 ರಂದು ವಿಐಪಿಗಳಿಗೆ ವಿಶೇಷ ದರುಶನವಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿತ್ಯವೂ ತಿರುಪತಿಯ ದೇವಸ್ಥಾನಕ್ಕೆ ಲಕ್ಷಾಂತರ ಯಾತ್ರಾರ್ಥಿಗಳು ಭೇಟಿ ನೀಡುತ್ತಿದ್ದು,ವಿಐಪಿಗಳು ಕೂಡ ಆಗಮಿಸಿ ದರುಶನ ಪಡೆಯುತ್ತಾರೆ. ಆದ್ರೆ ಇದೀಗ ಡಿಸೆಂಬರ್‌ 27 ರಂದು ಸರತಿ ಸಾಲಿನಲ್ಲಿಯೇ ತಿರುಮಲನ ದರುಶನ ಪಡೆಯಬೇಕಿದೆ.ಅಂದು ವಿಐಪಿಗಳಿಗೆ ವಿಶೇಷ ದರುಶನವಿರುವುದಿಲ್ಲ. ಯಾವುದೇ ಶಿಫಾರಸು ಪತ್ರಗಳನ್ನು ನೀಡಿದರೂ ಪ್ರಯೋಜನವಿಲ್ಲ.
ಹೌದು, ತಿರುಪತಿಯಲ್ಲಿ ಜನವರಿ 2 ರಂದು ವೈಕುಂಠ ಏಕಾದಶಿ ಇರುವ ಹಿನ್ನೆಲೆಯಲ್ಲಿ ಡಿಸೆಂಬರ್ 27 ರಂದು ದೇವಾಲಯದ ಶುದ್ದೀಕರಣ ನಡೆಯಲಿದೆ. ಹೀಗಾಗಿ ವಿಐಪಿ ದರುಶನ ವನ್ನು ರದ್ದುಗೊಳಿಸಲಾಗಿದೆ. ಡಿಸೆಂಬರ್ 27 ರಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ದೇವಸ್ಥಾನದಲ್ಲಿ ಕೋಯಿಲ್ ಆಳ್ವಾರ್ ತಿರುಮಂಜನ ನಡೆಯಲಿದೆ. ಈ ಕಾರಣಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಭಕ್ತರು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಟಿಟಿಡಿಗೆ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!