ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಂಧಿನಗರ ಮತ್ತು ಮುಂಬೈ ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮತ್ತೆ ದನಕ್ಕೆ ಡಿಕ್ಕಿ ಹೊಡೆದಿದೆ.
ಉದ್ವಾಡ ಮತ್ತು ವಾಪಿ ನಿಲ್ದಾಣದ ಮಧ್ಯೆ ಅವಘಡ ಸಂಭವಿಸಿದೆ. ಎರಡು ತಿಂಗಳ ಹಿಂದಷ್ಟೇ ರೈಲು ಸಂಚಾರ ಆರಂಭವಾಗಿದೆ. ಎರಡು ತಿಂಗಳಲ್ಲಿ ನಾಲ್ಕು ಬಾರಿ ದನಕ್ಕೆ ರೈಲು ಡಿಕ್ಕಿಯಾಗಿದೆ.
ಲೆವೆಲ್ ಕ್ರಾಸಿಂಗ್ ಗೇಟ್ ಸಮೀಪ ರೈಲು ದನಕ್ಕೆ ಡಿಕ್ಕಿಯಾಗಿದೆ. ರೈಲಿನ ಮುಂಭಾಗ ಸ್ವಲ್ಪ ಹಾನಿಯಾಗಿದೆ. ಅದನ್ನು ಸರಿಪಡಿಸಲಾಗುತ್ತಿದೆ. ಅಪಘಾತದಿಂದಾಗಿ ಹತ್ತು ನಿಮಿಷ ತಡವಾಗಿ ರೈಲು ಪ್ರಯಾಣ ಆರಂಭವಾಗಿದೆ.