ಹೊಸದಿಗಂತ ವರದಿ, ತುಮಕೂರು
ಬಹಳ ವರ್ಷಗಳ ನಂತರ ಜುಲೈ ಮೊದಲನೇ ವಾರದಲ್ಲಿ ಶೃಂಗೇರಿ ಕಿರಿಯ ಶ್ರೀ ಹಾಗೂ ಜಗದ್ಗುರುಗಳಾದ ವಿಧುಶೇಖರ ಭಾರತಿ ಶ್ರೀಗಳು ತುಮಕೂರು ನಗರಕ್ಕೆ ಚಿತ್ತೈಸಿ ಸಮಸ್ತ ಭಕ್ತ ವೃಂದಕ್ಕೆ ಅನುಗ್ರಹಿಸಲು ಸಮ್ಮತಿಸಿರುತ್ತಾರೆ ಎಂದು ಶಂಕರ ಸೇವಾಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.
ಬಹಳ ವರ್ಷಗಳಿಂದ ನಾವೆಲ್ಲರು ಕಾಯುತ್ತಿದ್ದ ಈ ಶುಭ ಕಾರ್ಯಕ್ರಮ ಯಶಸ್ವಿಯಾಗಿ ಶ್ರದ್ಧಾ ಭಕ್ತಿಯಿಂದ ನೆರವೇರಿಸಲು ತುಮಕೂರಿನ ಸಮಸ್ತ ಭಕ್ತ ವೃಂದದವರ ಸಹಕಾರ ಅತಿ ಅವಶ್ಯವಿದ್ದು, ಈ ಬಗ್ಗೆ ಚರ್ಚಿಸಲು ಮೇ.22 ರಂದು ಸಂಜೆ 6 ಗಂಟೆಗೆ ಶಂಕರ ಮಠದಲ್ಲಿ ವಿಪ್ರ ಸಂಘಟನೆಗಳ ಸಭೆ ಕರೆಯಲಾಗಿದೆ.
ತಾವುಗಳು ಸಕಾಲಕ್ಕೆ ಆಗಮಿಸಿ ಸೂಕ್ತ ಸಲಹೆ ಸೂಚನೆಗಳನ್ನು ಕೊಡುವುದರ ಮೂಲಕ ಕಾರ್ಯಕ್ರಮ ಯಶಸ್ವಿಯಾಗಲು ಕಾರಣೀಭೂತರಾಗಿ, ಜಗದ್ಗುರು ಗಳ ಕೃಪೆಗೆ ಪಾತ್ರರಾಗಬೇಕೆಂದು ಅಧ್ಯಕ್ಷರು ಮನವಿ ಮಾಡಿದ್ದಾರೆ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ