ಹೊಸದಿಗಂತ ಡಿಜಿಟಲ್ ಡೆಸ್ಕ್:
ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಹಿಂಸಾಚಾರದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಹಿಂದು ಕುಟುಂಬಗಳನ್ನು ವ್ಯವಸ್ಥಿತವಾಗಿ ಗುರಿಯಾಗಿಸಲಾಗಿದೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಹೇಳಿದ್ದಾರೆ.
ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಅವರು, ಹಿಂದು ನಿವಾಸಿಗಳಿಗೆ ಸೇರಿದ ಮನೆಗಳಿಗೆ ಶಾಯಿಯಿಂದ ಗುರುತು ಹಾಕಲಾಗಿತ್ತು ಮತ್ತು ಬೆಂಕಿ ಹಚ್ಚುವ ಮೊದಲು ಕಣ್ಗಾವಲಿನಲ್ಲಿಡಲಾಗಿತ್ತು ಎಂದರು.
ಹಿಂದು ಒಡೆತನದ ಮನೆಗಳು ಮತ್ತು ಅಂಗಡಿಗಳನ್ನು ಗುರುತಿಸಲು ದಾಳಿಕೋರರಿಗೆ ಇಬ್ಬರು ಸ್ಥಳೀಯ ಮುಸ್ಲಿಂ ನಿವಾಸಿಗಳು ಸಹಾಯ ಮಾಡಿದ್ದಾರೆ. ವಿಶೇಷವಾಗಿ ಶುಕ್ರವಾರದಂದು ಇಂತಹ ಹಿಂಸಾಚಾರಗಳು ಆಗಾಗ್ಗೆ ಸಂಭವಿಸುತ್ತವೆ ಎಂದು ಅವರು ಆರೋಪಿಸಿದ್ದಾರೆ.