ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಎಲ್ಲಾ ಕಷ್ಟಗಳು ಮತ್ತು ದುಃಖಗಳನ್ನು ಹೋಗಲಾಡಿಸಲು ನಾವು ದೇವರನ್ನು ಪ್ರಾರ್ಥಿಸಲು ದೇವಸ್ಥಾನಕ್ಕೆ ಹೋಗುತ್ತೇವೆ. ಆದರೆ, ಆ ದೇವಸ್ಥಾನದಲ್ಲೇ ನಮಗೆ ಕಷ್ಟ ಬಂದರೆ, ಸಂಕಷ್ಟಕ್ಕೆ ಸಿಲುಕಿದರೆ. ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಈ ಭಕ್ತನ ವಿಷಯದಲ್ಲಿ ನಡೆದದ್ದು ಇದೇ. ದೇವರನ್ನು ಪ್ರಾರ್ಥಿಸಲು ದೇವಸ್ಥಾನಕ್ಕೆ ಹೋದವ ದೇವಸ್ಥಾನದಲ್ಲಿ ವಿಗ್ರಹದ ಕೆಳಗೆ ಸಿಲುಕಿಕೊಂಡರು. ಆಚೆ ಬರಲಾಗದೆ ಒದ್ದಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುಜರಾತಿನ ದೇವಸ್ಥಾನವೊಂದಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ದೇವಾಲಯದಲ್ಲಿನ ಆನೆಯ ಪ್ರತಿಮೆ ಇದೆ. ಆ ದೇವಸ್ಥಾನಕ್ಕೆ ಬರುವ ಭಕ್ತರು ಆನೆಯ ಪ್ರತಿಮೆಯ ಕೆಳಗೆ ತೂರಿ ಹೊರಗೆ ಬರುತ್ತಾರೆ. ಹೀಗೆ ಮಾಡಿದರೆ ಎಲ್ಲವೂ ಸರಿಹೋಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈತನೂ ಹಾಗೆ ಮಾಡಿದ್ದಾನೆ.
ಪ್ರತಿಮೆ ಕೆಳಗೆ ನುಗ್ಗುತ್ತಿದ್ದಂತೆ ಅನಿರೀಕ್ಷಿತವಾಗಿ ಸಿಕ್ಕಿಹಾಕಿಕೊಂಡರು. ಆ ವೇಳೆ ಅಲ್ಲಿ ನೆರೆದಿದ್ದ ಜನ ಆತನನ್ನು ಹೊರಗೆ ತರಲು ಶತಪ್ರಯತ್ನ ಮಾಡಿದ್ದಾರೆ.
Any kind of excessive bhakti is injurious to health 😮 pic.twitter.com/mqQ7IQwcij
— ηᎥ†Ꭵղ (@nkk_123) December 4, 2022