ಮನೆ ಮನೆಗೂ ತೆರಳಿ ‘ಮತ ನೀಡಿ’ ಎಂದ ವೀರಣ್ಣ ಚರಂತಿಮಠ

ಹೊಸದಿಗಂತ ವರದಿ ಬಾಗಲಕೋಟೆ :

ಬಾಗಲಕೋಟೆ ಮತಕ್ಷೇತ್ರದ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಅವರು ನಗರದ ಮೋಟಗಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರದ ವಿಜಯದ ಪಾದಯಾತ್ರೆಯನ್ನು ಪ್ರಾರಂಭಿಸಿದರು.

ನಗರದ 5 ಮತ್ತು 9 ನೇ ವಾರ್ಡಗಳಲ್ಲಿ ಪಾದಯಾತ್ರೆ ಮೂಲಕ ಮನೆ ಮನೆ ಸಂಪರ್ಕಿಸಿ ಅಭಿವೃದ್ಧಿ ಪರ ಬಿಜೆಪಿಗೆ ಮತ ನೀಡಿ ಗೆಲ್ಲಿಸಬೇಕು ಎಂದ ಮನವಿ ಮಾಡಿಕೊಂಡರು. ನಾಡಿನ ಸೇವೆಗೆ ಸಮರ್ಪಿತವಾಗಿರುವ ಬಿಜೆಪಿ ಪಕ್ಷಕ್ಕೆ ಜನರು ಸಂಪೂರ್ಣ ಬಹುಮತದೊಂದಿಗೆ ಆಶೀರ್ವಾದ ಮಾಡುವ ಮೂಲಕ ಸಮೃದ್ಧ ಕರ್ನಾಟಕ ನಿರ್ಮಿಸುವ ಕಾರ್ಯದಲ್ಲಿ ಕೈಜೋಡಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಬೂಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ,ನಗಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ,ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಜು ನಾಯ್ಕರ,ಲಕ್ಷ್ಮೀನಾರಾಯಣ ಕಾಸಟ, ಸತ್ಯನಾರಾಯಣ ಹೇಮಾದ್ರಿ,ಗುರು ಬಸವ ಸೂಳಿಬಾವಿ,ಮಹಾಂತೇಶ ಶೆಟ್ಡರ,ಶರಣಪ್ಪ ಗುಳೆದ,ಪ್ರಭುಸ್ವಾಮಿ ಸರಗಣಾಚಾರಿ,ಶರಣಪ್ಪ ಕೇರೂರ,ಶಿವಾನಂದ ಟವಳಿ,ಪ್ರೇಮಾ ಅಂಬಿಗೇರ,ಸಾಗರ ಬಂಡಿ,ಮಹೇಶ ಕಮತಗಿ,ಈರಣ್ಣ ಕಲಬುರ್ಗಿ,ಶಂಕರ ಸಗರ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!