ಹೊಸ ದಿಗಂತ ದಿಜಿಟಲ್ ಡೆಸ್ಕ್:
ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಗಲುವಿಕೆಗೆ ವಿಶ್ವಹಿಂದು ಪರಿಷತ್ ಸಂತಾಪ ವ್ಯಕ್ತಪಡಿಸಿದೆ.
‘ನಡೆದಾಡುವ ದೇವರು, ಕಾಯಕ ಯೋಗಿ, ಜ್ಞಾನ ಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ದೇವರಲ್ಲಿ ಐಕ್ಯರಾಗಿದ್ದು, ಅವರ ಅಗಲುವಿಕೆ ಹಿಂದು ಸಮಾಜಕ್ಕೆ ತುಂಬಲಾರದ ನಷ್ಟ. ಅವರು ನೀಡಿರುವ ಜ್ಞಾನದ ಬೆಳಕು ಸಾರ್ಥಕ ಬದುಕು ನಡೆಸಲು ಪ್ರೇರಣಾ ಶಕ್ತಿಯಾಗಿದೆ. ಶ್ರೀಗಳ ಕೃಪೆ ನಮ್ಮ ಮೇಲೆ ಸದಾ ಇರಲಿ ಎಂದು ಶ್ರೀ ಗುರುಗಳಲ್ಲಿ ಪ್ರಾರ್ಥನೆೞ ಎಂದು ವಿಶ್ವಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಸಂತಾಪ ಸೂಚಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ