ಹೊಸ ದಿಗಂತ ವರದಿ, ಬೀದರ್ :
ಬೀದರ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನಿಂದ ಮಂಗಳವಾರ ನಗರದ ಬಾವಗಿ ಲ್ಯಾಬೋರೇಟರಿಯ ಪ್ರಾಂಗಣದಲ್ಲಿ ಲಿಂಗೈಕ್ಯರಾದ ನಡೆದಾಡುವ ದೇವರು ಸಿದ್ದೇಶ್ವರ ಶ್ರೀ ಗಳ ನುಡಿ ನಮನ ಏರ್ಪಡಿಸಲಾಗಿತ್ತು. ಈ ಸಂದರ್ಭ ಪ್ರಗತಿ ಶಿಕ್ಷಣ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳ ವತಿಯಿಂದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯರಾದ ನಿಮಿತ್ಯ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಿ ನುಡಿ ನಮನ ಸಲ್ಲಿಸಲಾಯಿತು.
ಈ ವೇಳೆ ಡಾ. ಎಂ. ಜಿ. ದೇಶಪಾಂಡೆ, ವೀರಭದ್ರಪ್ಪ ಉಪ್ಪಿನ್, ಅರವಿಂದ ಕುಲಕರ್ಣಿ, ಸಂಜುಕುಮಾರ ಸ್ವಾಮಿ, ಬಳವಂತ ರಾವ ಚೆಲವಾ, ನರಸಪ್ಪ ಸೋಲಪುರೆ, ಶ್ರೀ ಮಂತ ಶಿಳವಾನೆ, ಭಾಗವತ ಶಿಳವಾನೆ ಮುಂತಾದವರು ಹಾಜರಿದ್ದು, ನುಡಿ ನಮನ ಸಲ್ಲಿಸಿದರು.