ಹೊಸದಿಗಂತ ವರದಿ, ವಿಜಯಪುರ:
ನಾವು ಅಲ್ಪ ಸಂಖ್ಯಾತ ವಿರೋಧಿಗಳಲ್ಲ, ದೇಶದ್ರೋಹಿ ವಿರೋಧಿಗಳು ಯಾರು ದೇಶಕ್ಕೆ ತೊಂದರೆ ಕೊಡುತ್ತಾರೋ ಅಂತಹವರ ತಲೆ ಮೇಲೆ ಬಾಂಬ್ ಹಾಕುತ್ತೇವೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ಯೋಜನೆಗಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಅಲ್ಪಸಂಖ್ಯಾತ ವಿರೋಧಿಯಲ್ಲ. ನಾವು ದೇಶದ್ರೋಹಿಗಳ ವಿರೋಧಿಗಳು. ದೇಶದ್ರೋಹ ಮಾಡಿದವರ ತಲೆ ಮೇಲೆ ಬಾಂಬ್ ಹಾಕುತ್ತೇವೆ. ಅಲ್ಪಸಂಖ್ಯಾತರು ದೇಶ ದ್ರೋಹಿಗಳಲ್ಲ. ಪಾಪ ಅವರು ಏನು ಮಾಡಿಲ್ಲ ಎಂದರು.
ಅಲ್ಲದೆ ಮುಸ್ಲಿಂರಿಗೆ ಮತ ಹಾಕಬೇಡ ಎಂದಿರುವ ಬಗ್ಗೆ ಶಾಸಕ ಯತ್ನಾಳಗೆ ಕೇಳಿ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡ ಅಣ್ಣಪ್ಪ ಸಾಹುಕಾರ ಖೈನೂರ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.