ಚಾತುರ್ಮಾಸ್ಯ ಪೂರೈಸಿದ ಪರ್ತಗಾಳಿ ಶ್ರೀಗಳಿಗೆ ಸ್ವಾಗತ

ಹೊಸದಿಗಂತ ವರದಿ, ಅಂಕೋಲಾ:

ಕುಮಟಾದಲ್ಲಿ ಚಾತುರ್ಮಾಸ್ಯ ಪೂರೈಸಿ ಮೂಲಮಠ ಪರ್ತಗಾಳಿಗೆ ಮರಳುತ್ತಿರುವ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಅವರನ್ನು ಗುರುವಾರ ಶ್ರೀ ವೀರವಿಠ್ಠಲ ಮಠ ಕಮಿಟಿ ಮತ್ತು ಜಿ.ಎಸ್.ಬಿ ಭಾಂಧವರು ರಾ.ಹೆಯಲ್ಲಿ ಸ್ವಾಗತಿಸಿ ಬೀಳ್ಕೊಟ್ಟರು.
ಮಠದ ವತಿಯಿಂದ ಶ್ರೀಗಳಿಗೆ ಫಲಪುಷ್ಪ ಸಮರ್ಪಿಸಲಾಯಿತು.ಶ್ರೀ ವೀರವಿಠ್ಠಲ ಮಠ ಕಮಿಟಿ ಅಧ್ಯಕ್ಷ ಪುಂಡಲೀಕ ಪ್ರಭು, ಕಾರ್ಯದರ್ಶಿ ಮಾರುತಿ ನಾಯಕ, ಪ್ರಮುಖರಾದ ದಯಾನಂದ ಪ್ರಭು ಶೇಟಿಯಾ, ಉಮೇಶ ಪೈ, ಮಂಗಲದಾಸ ಕಾಮತ್, ರಾಮನಾಥ ಬಾಳಿಗಾ, ದರ್ಶನ ಪೈ, ವಿಠ್ಠಲ ಭಟ್, ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!