ದೇವರ ದರುಶನಕ್ಕೆ ಸ್ವಾಗತ, ಆದರೆ ನಾಡಿನ ಹಕ್ಕುಗಳಲ್ಲಿ ರಾಜಿಯಿಲ್ಲ: ಪ್ರಿಯಾಂಕ್ ಖರ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಭೇಟಿಗೆ ಸಂಬಂಧಿಸಿ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ರಾಜ್ಯದ ಭಾಷೆ, ನೆಲ ಹಾಗೂ ಜಲದ ಹಕ್ಕುಗಳ ವಿಚಾರದಲ್ಲಿ ಯಾವುದೇ ರೀತಿಯ ರಾಜಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೋಸೆಫ್ ವಿಜಯ್ ಅವರು ದೇವರ ದರ್ಶನಕ್ಕಾಗಿ ಕರ್ನಾಟಕಕ್ಕೆ ಆಗಮಿಸುತ್ತಿರುವುದು ಸಂತಸದ ವಿಚಾರ. ಅವರು ದೇವರ ಆಶೀರ್ವಾದ ಪಡೆದು ಹೋಗಲಿ, ಅದಕ್ಕೆ ಯಾರಿಗೂ ಯಾವುದೇ ಆಕ್ಷೇಪವಿಲ್ಲ ಎಂದು ಖರ್ಗೆ ಹೇಳಿದ್ದಾರೆ. … Continue reading ದೇವರ ದರುಶನಕ್ಕೆ ಸ್ವಾಗತ, ಆದರೆ ನಾಡಿನ ಹಕ್ಕುಗಳಲ್ಲಿ ರಾಜಿಯಿಲ್ಲ: ಪ್ರಿಯಾಂಕ್ ಖರ್ಗೆ