ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಪಾಲರು ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನದಲ್ಲಿರುವುದು ರೂಢಿ. ಆದರೆ, ಪಶ್ಚಿಮ ಬಂಗಾಳದಲ್ಲಿ ಇದೀಗ ವಿಧಾನಸಭೆಯಲ್ಲಿ ಈ ಕುರಿತ ಮಸೂದೆಯೊಂದನ್ನು ತಂದು ಮುಖ್ಯಮಂತ್ರಿಯನ್ನೇ ವೈಸ್ ಚಾನ್ಸೆಲರ್ ಆಗಿಸುವ ತೀರ್ಮಾನವನ್ನು ಮಮತಾ ಬ್ಯಾನರ್ಜಿ ಸಚಿವ ಸಂಪುಟವು ತೆಗೆದುಕೊಂಡಿರುವುದಾಗಿ ವರದಿಯಾಗಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗದೀಪ ಧನ್ಕರ್ ಅವರ ನಡುವೆ ತಿಕ್ಕಾಟವಾಗುತ್ತಿರುವುದು ತಿಳಿದ ಸಂಗತಿಯೇ.
ಸುಮಾರು 17 ವಿಶ್ವವಿದ್ಯಾಲಯಗಳ ವೈಸ್ ಚಾನ್ಸೆಲರ್ ಸ್ಥಾನದಲ್ಲಿದ್ದಾರೆ ಆ ರಾಜ್ಯದ ರಾಜ್ಯಪಾಲರು. ಇದೀಗ ಅವೆಲ್ಲವನ್ನೂ ಸಂಪೂರ್ಣ ತನ್ನ ಅಧೀನದಲ್ಲೇ ಇರಿಸಿಕೊಳ್ಳುವುದಕ್ಕೆ ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ