ಆಯಾ ಹಬ್ಬಗಳಿಗೆ, ಆಯಾ ದೇವಿಗಳಿಗೆ ವಿಭಿನ್ನವಾದ ಪ್ರಸಾದಗಳನ್ನು ನೈವೇದ್ಯಕ್ಕೆ ಇಡಲಾಗುತ್ತದೆ. ಅಂತೆಯೇ ನವರಾತ್ರಿಯ ಒಂಬತ್ತು ದಿನಗಳು ಯಾವ ನೈವೇದ್ಯ ತಯಾರಿಸಿ ಪ್ರಸಾದವನ್ನಾಗಿ ಇಡಬೇಕು, ಇಲ್ಲಿದೆ ಮಾಹಿತಿ..
ನಮ್ಮ ರಾಜ್ಯದಲ್ಲಿ ದೇವಿಗೆ 5 ವಿಧದ ಅನ್ನದ ನೈವೇದ್ಯ ನೀಡಲಾಗುತ್ತದೆ
ಬೆಲ್ಲದ ಅನ್ನ
ಅರಿಶಿಣದ ಅನ್ನ
ಕೇಸರಿ ಅನ್ನ
ಮೊಸರನ್ನ ಹಾಗೂ
ತರಕಾರಿ ಬೆರೆತ ಅನ್ನ
ಸಿಹಿ ತಿಂಡಿಗಳ್ಯಾವುದು?
ಒಬ್ಬಟ್ಟು
ಕರ್ಜಿಕಾಯಿ
ಲಡ್ಡು
ಆಂಬೊಡೆ
ಅಕ್ಕಿ ಪಾಯಸ
ರಸಾಯನ ಇತ್ಯಾದಿ..
ಕರ್ನಾಟಕದಲ್ಲಿ ದೇವಿಯ ಪೂಜೆ ವೇಳೆಗೆ ಪಾಯಸ, ಸಿಹಿ ಪೊಂಗಲ್, ಕೋಸಂಬರಿ, ಕಡಲೆ ಉಸುಲಿ ನೈವೇದ್ಯಕ್ಕೆ ಇಡಲಾಗುತ್ತದೆ. ಸಂಜೆ ಮುತ್ತೈದೆಯರನ್ನು ಮನೆಗೆ ಕೊಟ್ಟು ಬಾಗಿನ ನೀಡಿ, ಚಕ್ಕುಲಿ, ಕೋಡುಬಳೆ, ಉಂಡೆ ನೀಡಿ ಕಳುಹಿಸಲಾಗುತ್ತದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ರಸಗುಲ್ಲಾ ನೈವೈದ್ಯಕ್ಕೆ ಇಟ್ಟರೆ, ಗುಜರಾತ್ನಲ್ಲಿ ಡೋಕ್ಲಾ ಇಡುತ್ತಾರೆ. ಹಿಮಾಲಯದಲ್ಲಿ ಸಜ್ಜಿಗೆ ಇಟ್ಟರೆ, ಮಹಾರಾಷ್ಟ್ರದಲ್ಲಿ ತೆಂಗಿನ ಪಾಯಸ ನೈವೇದ್ಯಕ್ಕೆ ಇಡುತ್ತಾರೆ.