ಆ ಹಾಸ್ಟೆಲ್ ಸಿಟಿಯಿಂದ ತುಂಬಾನೇ ದೂರ ಇತ್ತು. ಆಗಾಗ ಕರೆಂಟ್ ಕೂಡ ಹೋಗ್ತಿತ್ತು. ಹೆಣ್ಣುಮಕ್ಕಳ ಹಾಸ್ಟೆಲ್ ಆಗಿದ್ರಿಂದ ನಾಲ್ಕು ಜನ ಸೆಕ್ಯುರಿಟಿ ಗಾರ್ಡ್ಸ್ ಇದ್ದರು.
ಹಾಸ್ಟೆಲ್ನಲ್ಲಿ ಹುಡುಗೀರು ಸುಮ್ಮನಿರೋಕೆ ಸಾಧ್ಯವಾ? ಏನಾದ್ರು ಒಂದು ಕಿತಾಪತಿ ಮಾಡಲೇಬೇಕು, ಒಮ್ಮೆ ಎಲ್ಲರೂ ಪ್ಲ್ಯಾನ್ ಮಾಡಿ, ಮಧ್ಯರಾತ್ರಿ ಚಿರತೆ ಬಂತು ಎಂದು ಕೂಗಿ, ಹೆಲ್ಪ್, ಹೆಲ್ಪ್ ಎಂದರು. ತಕ್ಷಣವೇ ಪಕ್ಕದ ರೂಂನವರು, ಸೆಕ್ಯುರಿಟಿ ಗಾರ್ಡ್ ಎಲ್ಲರೂ ಓಡಿ ಬಂದ್ರು.
ಅವರು ಬಂದಿದ್ದು ನೋಡಿ, ಹುಡುಗಿಯರಿಗೆ ಭಾರೀ ಮಜ, ಕಿಸಿ ಕಿಸಿ ನಗೋಕೆ ಶುರು ಮಾಡಿದ್ರು. ಸೆಕ್ಯುರಿಟಿ ಗಾರ್ಡ್ಗಳು ಇವರದೊಂದು ಹುಚ್ಚಾಟ ಅಂತ ಹೋದ್ರು. ಇನ್ನೊಂದ್ ಸಲ ಹೀಗೆಲ್ಲಾ ಮಾಡಿದ್ರೆ ಸರಿ ಇರೋದಿಲ್ಲ ಅಂತ ಹೇಳಿ ಹೋದ್ರು.
ಹುಡ್ಗೀರು ಕ್ಯಾರೆ ಅನ್ನಲಿಲ್ಲ, ಅದೇ ತಿಂಗಳಿನಲ್ಲಿ ಮೂರು ಬಾರಿ ತಮಾಷೆ ಮಾಡಿದ್ರು, ಪಕ್ಕದ ರೂಂನವರು ಬರೋದನ್ನೆ ನಿಲ್ಲಿಸಿದ್ರು, ಬೆಳಗ್ಗೆ ಎದ್ದು ಜಗಳ ಆಡುತ್ತಿದ್ದರು, ನಿದ್ದೆ ಹಾಳು ಮಾಡಬೇಡಿ ಅನ್ನೋರು.
ಹೀಗೆ ಒಮ್ಮೆ ನಿಜವಾಗಿಯೂ ಚಿರತೆಯನ್ನು ನೋಡಿದ್ರು, ಹಾಸ್ಟೆಲ್ ಕಾರಿಡಾರ್ ಮುಂದೆ ಚಿರತೆ ಓಡಾಟ ಕಾಣಿಸಿತು, ಭಯಕ್ಕೆ ಏನು ಮಾಡೋದು ತಿಳಿಯದೇ ಕೂಗಾಡಿದ್ರು, ಚಿರತೆ ಇವರ ರೂಂ ಬಳಿಯೇ ಬಂದು ನಿಂತಿತ್ತು. ಹೆದರಿಕೆಗೆ ಒಬ್ಬಳು ಮೂರ್ಛೆ ಹೋದಳು, ಎಷ್ಟು ಕೂಗಿದರೂ ಸೆಕ್ಯುರಿಟಿ ಗಾರ್ಡ್ ಬರಲಿಲ್ಲ.ಹುಡುಗಿಯರು ಸರಿಯಾದ ಪಾಠ ಕಲಿತರು..
ಇಷ್ಟೇ ಅಲ್ವಾ? ನಂಬಿಕೆಯಿಂದ ನಾಲ್ಕು ಬಾರಿ ಬಂದವರಿಗೆ ಮೋಸ ಆದರೆ ಮತ್ತೆ ಬರೋದಕ್ಕೆ ಮನಸು ಮಾಡೋದಿಲ್ಲ. ಯಾರ ನಂಬಿಕೆ ಜತೆ, ಜೀವದ ಜತೆ ಆಟ ಆಡಬೇಡಿ, ಇದು ನಿಮ್ಮ ಜೀವಕ್ಕೆ ಒಂದು ದಿನ ಕುತ್ತು ತರುತ್ತದೆ, ಇತರರ ಮನಸ್ಸಿಗೆ ಹಾನಿ ಮಾಡುತ್ತದೆ.