ಈಗೆಲ್ಲಿ ಹೋಯ್ತು ಕಾಂಗ್ರೆಸ್ಸಿನ ಲಿಂಗಾಯತ ಪ್ರೀತಿ? ವಿಜಯೇಂದ್ರ ‘ಟ್ವೀಟ್’ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಧಿಕಾರದ ಆಸೆಗಾಗಿ ಲಿಂಗಾಯತ ಹೆಸರನ್ನು ಬಳಸಿಕೊಂಡ ಕಾಂಗ್ರೆಸ್ ನ ಪ್ರಮುಖರು ಸಿಎಂ ಮತ್ತು ಡಿಸಿಎಂ ಚುಕ್ಕಾಣಿ ಹಿಡಿಯುವ ಸಂದರ್ಭದಲ್ಲಿ ದಿಢೀರ್‌ ಮೌನವಾಗಿದ್ದಾರೆ ಎಂದು ಶಾಸಕ, ಬಿಜೆಪಿ ನಾಯಕ ಬಿ.ವೈ ವಿಜಯೇಂದ್ರ ಟೀಕಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ವಿಪರ್ಯಾಸವೆಂದರೆ ಕಾಂಗ್ರೆಸ್‌ನಲ್ಲಿ ಗರಿಷ್ಠ 39 ಶಾಸಕರನ್ನು ಗೆದ್ದರೂ ಕೂಡ ಲಿಂಗಾಯತರಿಗೆ ಸರಿಯಾದ ಸ್ಥಾನ ಹಂಚಿಕೆ ಮಾಡುವಲ್ಲಿ ಯಾವುದೇ ಬಲವಾದ ಧ್ವನಿಯಿಲ್ಲದಂತಾಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ನಿಜರೂಪ ಇದೀಗ ಅನಾವರಣಗೊಳ್ಳುತ್ತಿದೆ. ಲಿಂಗಾಯತರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಕಾಂಗ್ರೆಸ್‌, ಎಂದಿಗೂ ಲಿಂಗಾಯಿತ ಸಮುದಾಯಕ್ಕೆ ನ್ಯಾಯ ಒದಗಿಸಲು ಸಾಧ್ಯವೇ ಇಲ್ಲ. ಅಣ್ಣ ಬಸವಣ್ಣ ಮತ್ತು ಅವರ ಬೋಧನೆಗಳನ್ನು ನಿಜವಾಗಿಯೂ ಪ್ರತಿನಿಧಿಸುವ ಬಿಜೆಪಿ, “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ತತ್ವವನ್ನು ಅನುಸರಿಸುವ ಮೂಲಕ ಎಲ್ಲರಿಗೂ ನ್ಯಾಯವನ್ನು ಒದಗಿಸುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್‌ ನ ಸುಳ್ಳಿನ ಗ್ಯಾರಂಟಿಗಳಿಗೆ ಮೋಸ ಹೋಗುವ ಕರ್ನಾಟಕದ ನಾಗರಿಕರು ವಾಸ್ತವವನ್ನು ಅರಿತೊಂಡು, ಬಿಜೆಪಿ ಮತ್ತು ನರೇಂದ್ರ ಮೋದಿ ಅವರ “ತಾಯಿ ಭಾರತಿ” ಸೇವೆಯ ಜೊತೆಗೆ ನಿಲ್ಲಲಿದ್ದಾರೆಂದು ಭಾವಿಸುತ್ತೇನೆ ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!