ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲಾರದಲ್ಲಿ ಭಾನುವಾರ ನಡೆಯಬೇಕಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ದಿಢೀರ್ ರದ್ದಾಗಿದ್ದು, ಕಾಂಗ್ರೆಸ್ ಇದನ್ನು ಲೇವಡಿ ಮಾಡಿದೆ.
ಎಲ್ಲೇ ಹೋದರೂ ಬಿಜೆಪಿಗ ಖಾಲಿ ಕುರ್ಚಿಗಳೇ ಸ್ವಾಗತಿಸುತ್ತವೆ, ಬಿಜೆಪಿ ನಿರ್ನಾಮದ ಕಥೆಯನ್ನು ಈ ಖಾಲಿ ಕುರ್ಚಿಗಳೇ ಹೇಳುತ್ತಿವೆ. ಹಣ ಕೊಟ್ಟರೂ, ಸರ್ಕಸ್ ಮಾಡಿದ್ರೂ ಜನ ಬಂದಿಲ್ಲ. ಇದು ಜನಾಕ್ರೋಶಕ್ಕೆ ನಿದರ್ಶನ. ಖಾಲಿ ಕುರ್ಚಿ ನೋಡಿ ಯಾತ್ರೆ ರದ್ದುಮಾಡೋಕಿಂತ ನಾಚಿಕೆಗೇಡು ಇನ್ನೇನಿದೆ ಎಂದಿದ್ದಾರೆ.