ಕಪಾಟಿನಲ್ಲಿದ್ದ ಪುಸ್ತಕದ ಆತ್ಮಹತ್ಯೆಗೆ ಕಾರಣ ಯಾರು? : ಸುರೇಶ್ ಕುಮಾರ್ ಪೋಸ್ಟ್ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವಿಟರ್‌ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಹಿಂದೆ ಕಪಾಟಿನಲ್ಲಿದ್ದ ಎಲ್ಲ ಪುಸ್ತಕಗಳನ್ನು ಓದಿ, ಯಾವ ಪುಸ್ತಕ ಎಲ್ಲಿದೆ ಎಂದು ಜನ ಕಣ್ಮುಚ್ಚಿಯೂ ಹೇಳುತ್ತಿದ್ದರು. ಆದರೆ ಇದೀಗ ಮೊಬೈಲ್ ಬಂದ ನಂತರ, ಕಪಾಟಿನಲ್ಲಿರುವ ಪುಸ್ತಕಗಳ ಧೂಳು ತೆಗೆಯೋದಕ್ಕೂ ಮುಟ್ಟೋದಿಲ್ಲ ಎನ್ನುವಂತಾಗಿದೆ.

ಈ ಬಗ್ಗೆ ಸುರೇಶ್ ಕುಮಾರ್ ಅವರು ತಮ್ಮ ಗೆಳೆಯರೊಬ್ಬರ ಕಳಿಸಿದ್ದ ಫೋಟೊ ವೊಂದನ್ನು ಪೋಸ್ಟ್ ಮಾಡಿದ್ದಾರೆ. ಮುಚ್ಚಿದ ಕಪಾಟಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪುಸ್ತಕ ತನ್ನ ಡೆತ್ ನೋಟ್‌ನಲ್ಲಿ ಬರೆದಿತ್ತು, ನನ್ನ ಸಾವಿಗೆ ಮೊಬೈಲ್ ಕಾರಣವೆಂದು!
ಈ ರೀತಿ ಪೋಸ್ಟ್‌ನಲ್ಲಿ ಬರೆದಿದ್ದು,ನನ್ನ ಗೆಳೆಯರೊಬ್ಬರು ಕಳಿಸಿದ್ದು, ಇದು ಎಷ್ಟೊಂದು ನಿಜ ಅಲ್ಲವೇ ಎಂದು ಕ್ಯಾಪ್ಷನ್ ಹಾಕಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!