ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವಿಟರ್ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಹಿಂದೆ ಕಪಾಟಿನಲ್ಲಿದ್ದ ಎಲ್ಲ ಪುಸ್ತಕಗಳನ್ನು ಓದಿ, ಯಾವ ಪುಸ್ತಕ ಎಲ್ಲಿದೆ ಎಂದು ಜನ ಕಣ್ಮುಚ್ಚಿಯೂ ಹೇಳುತ್ತಿದ್ದರು. ಆದರೆ ಇದೀಗ ಮೊಬೈಲ್ ಬಂದ ನಂತರ, ಕಪಾಟಿನಲ್ಲಿರುವ ಪುಸ್ತಕಗಳ ಧೂಳು ತೆಗೆಯೋದಕ್ಕೂ ಮುಟ್ಟೋದಿಲ್ಲ ಎನ್ನುವಂತಾಗಿದೆ.
ಈ ಬಗ್ಗೆ ಸುರೇಶ್ ಕುಮಾರ್ ಅವರು ತಮ್ಮ ಗೆಳೆಯರೊಬ್ಬರ ಕಳಿಸಿದ್ದ ಫೋಟೊ ವೊಂದನ್ನು ಪೋಸ್ಟ್ ಮಾಡಿದ್ದಾರೆ. ಮುಚ್ಚಿದ ಕಪಾಟಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪುಸ್ತಕ ತನ್ನ ಡೆತ್ ನೋಟ್ನಲ್ಲಿ ಬರೆದಿತ್ತು, ನನ್ನ ಸಾವಿಗೆ ಮೊಬೈಲ್ ಕಾರಣವೆಂದು!
ಈ ರೀತಿ ಪೋಸ್ಟ್ನಲ್ಲಿ ಬರೆದಿದ್ದು,ನನ್ನ ಗೆಳೆಯರೊಬ್ಬರು ಕಳಿಸಿದ್ದು, ಇದು ಎಷ್ಟೊಂದು ನಿಜ ಅಲ್ಲವೇ ಎಂದು ಕ್ಯಾಪ್ಷನ್ ಹಾಕಿದ್ದಾರೆ.
ಎಷ್ಟು ದಿಟ ಅಲ್ಲವೇ?
(ಗೆಳೆಯರೊಬ್ಬರು ಕಳಿಸಿದ್ದು). pic.twitter.com/RPouqxBBUb— S.Suresh Kumar (@nimmasuresh) February 2, 2022