ಹೊಸ ದಿಗಂತ ಡಿಜಿಟಲ್ ಡೆಸ್ಕ್
ಕಾರವಾರಕ್ಕೆ ಕೈಗಾರಿಕೆಗಳು ಬರಬೇಕು ಎಂಬುದು ಸಚಿವ ಮುರುಗೇಶ ನಿರಾಣಿಯವರಿಗೆ ಬಂದ ಬೇಡಿಕೆ. ಇದಕ್ಕೆ ಸದನದಲ್ಲಿ ಉತ್ತರಿಸುತ್ತ, ಭೂಮಿ ಸಿಕ್ಕಿದ ಕೂಡಲೇ ಕೆಲವು ಕೈಗಾರಿಕಾ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದರು ಸಚಿವರು. ಇಡೀ ಉತ್ತರ ಕನ್ನಡದಲ್ಲಿ ಭೂಮಿ ಏಕೆ ಸಿಗುತ್ತಿಲ್ಲ ಎಂಬ ಬಗ್ಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕಾಂಗ್ರೆಸ್ ಶಾಸಕ ಆರ್ ವಿ ದೇಶಪಾಂಡೆ ಚರ್ಚೆಗೆ ಮಾತು ಜೋಡಿಸಿದರು.