WHY SO | ಶವ ಸಂಸ್ಕಾರ ಮಾಡೋವಾಗ ನೀರು ತುಂಬಿರೋ ಮಡಕೆ ಒಡೆಯೋದ್ಯಾಕೆ? ಇದರ ಹಿಂದಿರೋ ಕಾರಣ ಏನು?

ಹಿಂದು ಧರ್ಮದಲ್ಲಿ ಹುಟ್ಟಿನಿಂದ ಸಾಯೋ ತನಕ ಹಲವಾರು ಸಂಪ್ರದಾಯಗಳಿವೆ. ಹುಟ್ಟಿದಾಗ ನಾಮಕರಣ, ತೊಟ್ಟಿಲು, ಅನ್ನಪ್ರಾಶನ, ಉಪನಯನ ಹೀಗೆ ಹತ್ತು ಹಲವು ಸಂಪ್ರದಾಯ. ಸತ್ತಾಗಲೂ ಅಷ್ಟೇ ತಲೆಕೂದಲು ಬೋಳಿಸೋದು, ವೃತ ಹಿಡಿಯೋದು, ನೀರು ತುಂಬಿದ ಮಣ್ಣಿನ ಮಡಕೆ ಒಡೆಯೋದು ಕೂಡ ಹಿಂದು ಧರ್ಮದಲ್ಲಿ ನಂಬಿಕೆಯಿದೆ. ಇದು ಯಾಕೆ ಎಂದು ಯೋಚಿಸಿದ್ದೀರಾ? ನಾವು ಹೇಳ್ತೇವೆ ಕೇಳಿ.

ಹಿಂದು ಆಚರಣೆಗಳ ಪ್ರಕಾರ,ತಂದೆ-ತಾಯಿ ಸತ್ತಾಗ ಮಕ್ಕಳಾದವರು ಅವರ ಚಿತೆಗೆ ಬೆಂಕಿ ಇಡುತ್ತಾರೆ. ಆ ವೇಳೆ ಅವರೇ ತನ್ನ ಹೆಗಲ ಮೇಲೆ ನೀರು ತುಂಬಿದ ಮಣ್ಣಿನ ಮಡಕೆಯನ್ನು ಹೊತ್ತು, ಚಿತೆಗೆ 3 ಸುತ್ತು ಬರಬೇಕು. ಒಂದೊಂದು ಸುತ್ತು ಬರುವಾಗಲೂ ಮಡಕೆಯನ್ನು ಕತ್ತಿಯಿಂದ ರಂಧ್ರ ಮಾಡಲಾಗುತ್ತದೆ.

ಮೂರು ಸುತ್ತು ಬಂದ ನಂತರ ಅಲ್ಲೇ ಹಿಂದೆ ಕೆಳಗೆ ಹಾಕಿ ಒಡೆಯಲಾಗುತ್ತದೆ. ಮಡಿಕೆಯನ್ನು ಒಡೆದಾಗ ಮೃತದೇಹದಿಂದ ಆತ್ಮ ಮುಕ್ತಿ ಪಡೆಯಬಹುದು ಎಂದು ನಂಬಲಾಗಿದೆ. ಅಂದರೆ ಹೀಗೆ ಮಾಡೋದ್ರಿಂದ ಆತ್ಮ ದೇಹವನ್ನು ಬಿಟ್ಟು ಹೋಗುತ್ತದೆ ಎಂಬ ನಂಬಿಕೆ ಇದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!