Friday, December 8, 2023

Latest Posts

ಬಿಡಾಡಿ ದನಗಳ ದಾಳಿಗೆ ಮಹಿಳೆ ಬಲಿ: ನಗರಸಭೆ ಮುಂಭಾಗ ಶವವಿಟ್ಟು ಪ್ರತಿಭಟನೆ

ಹೊಸದಿಗಂತ ವರದಿ ಕೊಪ್ಪಳ:‌ 

ಬಿಡಾದಿ ದನ ದಾಳಿ ಮಾಡಿದ ಹಿನ್ನೆಲೆ ಮಹಿಳೆ ಮೃತಪಟ್ಟಿದ್ದು, ವಾಡ್೯ನ ನಾಗರಿಕರು ಸೋಮವಾರ ಮಧ್ಯಾಹ್ನ ನಗರಸಭೆ ಮುಂಭಾಗ ಶವ ಇಟ್ಟು ಪ್ರತಿಭಟನೆ ನಡೆಸಿದರು.

ಭಾನುವಾರ ಸಂಜೆ ನಗರದ 30 ನೇ ವಾಡ್೯‌ನ ದೇವರಾಜ್ ಕಾಲೋನಿಯಲ್ಲಿ ನಿವಾಸಿ ರಮೀಜಾ ಬೇಗಂ (44) ಬರ್ಹಿದೆಸೆಗೆ ತೆರಳಿದ್ದು, ಬಿಡಾಡಿ ದನಗಳ ಗುಂಪು ದಾಳಿ ಮಾಡಿದೆ. ಹೊಟ್ಟೆ ಭಾಗಕ್ಕೆ ದನ ಗುದ್ದಿದ್ದು, ಸ್ಥಳದಲೇ ಮಹಿಳೆ ಮೃತಪಟ್ಟಿದ್ದಾಳೆ.

ಘಟನೆ ಹಿನ್ನೆಲೆ ವಾಡ್೯ನ ನಾಗರಿಕರು ನಗರಸಭೆ ಮುಂಭಾಗ ಶವವಿಟ್ಟು, ಬಿಡಾಡಿ ದನಗಳನ್ನು ಗೋಶಾಲೆಗೆ ಬಿಡಿ ಜೊತೆಗೆ ಅವಘಡದ ಹೊಣೆ ನಗರಸಭೆ ಹೊರಬೇಕು. ಮೃತ ಮಹಿಳೆಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!