ಹೊಸದಿಗಂತ ವರದಿ, ಹುಬ್ಬಳ್ಳಿ:
ನಗರದ ಹುಬ್ಬಳ್ಳಿ ಟೈ ಕಂಪನಿ 10 ನೇ ಆವೃತ್ತಿಯ ಮತ್ತು ಮಹಿಳಾ ಕಾನ್ಕ್ಲೇವ್ ನ ಶೃಂಗಸಭೆಯನ್ನು ಶ್ರೀನಗರದ ನವೀನ ಹೊಟೇಲ್ ನಲ್ಲಿ ಮಾ. 26 ರಂದು ಆಯೋಜಿಸಲಾಗಿದೆ ಎಂದು ಟೈಕಾನ್ ಹುಬ್ಬಳ್ಳಿ ಅಧ್ಯಕ್ಷ ವಿಜೇಶ ಸೈಗಲ್ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ಬಾರಿಯು ಕಂಪನಿ ನಗರದ ಯುವ ಉದ್ಯಮಿಗಳನ್ನು ಮತ್ತು ಮಹಿಳೆಯರನ್ನು ಉತ್ತೇಜಿಸುವ ಉದ್ದೇಶದಿಂದ ಇನ್ಸ್ಪೆರ್, ಇಂಟಿಗ್ರೇಟೆಡ್ ಮತ್ತು ಇನೋವೆಟ್ ಎಂಬ ಧ್ಯೇಯ ವಾಕ್ಯದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಮಹಿಳಾ ಉದ್ಯಮಗಳಿಗೆ ಪ್ರೋತ್ಸಾಹಿಸುವುದಕ್ಕಾಗಿ ಪ್ರಶಸ್ತಿ ನೀಡಲಾಗುತ್ತದೆ ಎಂದರು.
ಅಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ. 10.30 ಕ್ಕೆ ಕಾರ್ಯಕ್ರಮವನ್ನು ಕೈಗಾರಿಕ ಸಚಿವ ಮುರಗೇಶ ನಿರಾಣಿ ಅವರು ಚಾಲನೆ ನೀಡಲಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡುದ ವಿಶ್ವದ ದಿಗ್ಗಜರನ್ನು ನಗರಕ್ಕೆ ಕರೆತಂದು ಇಲ್ಲಿಯ ನವ ಉದ್ಯಮೀಗಳಿಗೆ ಉತ್ತೇಜನ ನೀಡುವ ಕಾರ್ಯ ಟೈ ಕಂಪನಿ ಮಾಡುತ್ತಿದೆ ಎಂದು ತಿಳಿಸಿದರು.
ಅಂದು ಸಂಜೆ ಕಂಪನಿಯಿಂದ ಆ್ಯನ್ ಇವನಿಂಗ್ ವಿಥ್ ಲೆಜೆಂಡ್ಸ್ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಸುನಿಲ ಶೆಟ್ಟಿ, ಸುಧಾ ಮೂರ್ತಿ, ಪ್ರಭುದಾಸ ಭಾಗವಹಿಸುವರು ಎಂದರು.