ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಐಎಫ್ ಮತ್ತು ಕೆಜಿಐಎಫ್-2 ಸಿನಿಮಾಗಳ ಮೂಲಕ ಯಶ್ ದೇಶಾದ್ಯಂತ ರಾಕಿಭಾಯ್ ಆಗಿ ಜನಮನ್ನಣೆ ಗಳಿಸಿದರು. ಕೆಜೆಎಫ್ ನಂತರ ಯಶ್ ತಮ್ಮ ಮುಂದಿನ ಪ್ರಾಜೆಕ್ಟ್ಗೆ ಸಿದ್ಧವಾಗುತ್ತಿರುವಾಗ, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ವೈರಲ್ ಆಗುತ್ತಿದೆ. ತೆಲುಗು ದೇಶಂ ಪಕ್ಷದ ಯುವ ನಾಯಕ ನಾರಾ ಲೋಕೇಶ್ ಅವರನ್ನು ಯಶ್ ಭೇಟಿ ಮಾಡಿದ್ದಾರೆ. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಇಬ್ಬರ ನಡುವೆ ಚರ್ಚೆ ನಡೆದಿದೆಯಂತೆ. ಯಶ್ ಯಾಕೆ ನಾರಾ ಲೋಕೇಶ್ ಅವರನ್ನು ಭೇಟಿ ಮಾಡಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಇಬ್ಬರ ನಡುವೆ ಯಾವ ರೀತಿಯ ಚರ್ಚೆ ನಡೆದಿದೆ ಎಂಬ ಬಗ್ಗೆ ಸ್ಪಷ್ಟತೆ ಬರಬೇಕಿದೆ. ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ಯಶ್ ತೆಲುಗು ದೇಶಂ ಪಕ್ಷದ ಯುವ ನಾಯಕ ನಾರಾ ಲೋಕೇಶ್ ಅವರನ್ನು ಭೇಟಿ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.