ಅಂಕೋಲದ ಪ್ರಶಾಂತ ಕಡಲ ಕಿನಾರೆಯಲ್ಲಿ ರಕ್ಷಣಾ ಸಚಿವರಿಂದ ಯೋಗ, ಧ್ಯಾನ

ಹೊಸದಿಗಂತ ವರದಿ, ಅಂಕೋಲಾ:
ಕದಂಬ ನೌಕಾನೆಲೆ ಪ್ರದೇಶಕ್ಕೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಮುಂಜಾನೆ ನೌಕಾನೆಲೆ ಸಿಬ್ಬಂದಿಗಳೊಂದಿಗೆ ಕಡಲ ತೀರದಲ್ಲಿ ಯೋಗ, ಸೂರ್ಯ ನಮಸ್ಕಾರ,ಧ್ಯಾನ ಮೊದಲಾದ ದೈಹಿಕ ವ್ಯಾಯಾಮದಲ್ಲಿ ತೊಡಗಿಕೊಂಡರು.
ಅರ್ಗಾದ ಕದಂಬ ನೌಕಾನೆಲೆಗೆ ಗುರುವಾರ ರಾತ್ರಿ ಭೇಟಿ ನೀಡಿದ ಅವರು ನೌಕಾನೆಲೆ ಸಿಬ್ಬಂದಿಗಳೊಂದಿಗೆ ಬೆರೆತು ಅವರೊಂದಿಗೆ ಭೋಜನ ಸವಿದಿದ್ದರು. ಶುಕ್ರವಾರ ಮುಂಜಾನೆ ಸಹ ನೌಕಾನೆಲೆ ಸಿಬ್ಬಂದಿಗಳೊಂದಿಗೆ ಕಡಲ ಕಿನಾರೆಯ ಪ್ರಶಾಂತ ವಾತಾವರಣದಲ್ಲಿ ಯೋಗಾಸನ ಮಾಡುವ ಮೂಲಕ ತಮ್ಮ ದಿನಚರಿಯನ್ನು ಆರಂಭಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!