ನೀವು ನನಗೆ ಬೆಂಬಲ ನೀಡಿ, ನಾನು ನಿಮಗೆ ಹಿಂದು ರಾಷ್ಟ್ರ ಕೊಡುತ್ತೇನೆ: ಧೀರೇಂದ್ರ ಶಾಸ್ತ್ರಿ ಕರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನನಗೆ ಬೆಂಬಲ ಕೊಡಿ, ನಾನು ನಿಮಗೆ ಹಿಂದು ರಾಷ್ಟ್ರ ಕೊಡುತ್ತೇನೆ ಎಂದು ಬಾಗೇಶ್ವರ ಧಾಮ (Bageshwar Dham) ಮುಖ್ಯಸ್ಥ ಧೀರೇಂದ್ರ ಶಾಸ್ತ್ರಿ (Dhirendra Shastri) ಹೇಳಿದ್ದಾರೆ.

ಸುಭಾಷ್ ಚಂದ್ರ ಬೋಸ್ (Subhash Chandra Bose) ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ. ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ ಎಂಬ ಘೋಷಣೆ ನೀಡಿದ್ದರು. ಆದರೆ ನಾವು ಇಂದು ಹಿಂದು ರಾಷ್ಟ್ರ ಮಾಡಬೇಕಾಗಿದೆ. ಅದಕ್ಕಾಗಿ ನಾನು ಒಂದು ಘೋಷಣೆಯನ್ನು ನೀಡುತ್ತೇನೆ. ನೀವು ನನ್ನನ್ನು ಬೆಂಬಲಿಸಿ, ನಾನು ನಿಮಗೆ ಹಿಂದು ರಾಷ್ಟ್ರವನ್ನು ನೀಡುತ್ತೇನೆ ಎಂದು ಕರೆ ನೀಡಿದ್ದಾರೆ.

ಈಗ ಪವಾಡ ನಡೆಯುತ್ತಿದ್ದೆ. ಅದೇನೆಂದರೆ ಮೊದಲೆನೆಯಂದು ಇಂದು ಭಾರತದ ಹಿಂದುಗಳು ಒಂದಾಗುತ್ತಿದ್ದಾರೆ. ಎರಡನೇ ಪವಾಡ ಬಾಗೇಶ್ವರ ಧಾಮದಲ್ಲಿ ನೋಡಬೇಕು. ನೀವೇ ಬಂದು ನೋಡಬೇಕು ಎಂದು ತಿಳಿಸಿದ್ದಾರೆ.ಮೂರನೆಯ ಪವಾಡ ಏನೆಂದರೆ, ನಿಮ್ಮಲ್ಲಿ ಸನಾತನದ ಒಂದು ತುಣುಕಾದರೂ ಇದ್ದರೆ, ನೀವು ನನ್ನನ್ನು ಬೆಂಬಲಿಸಿ. ನಾನು ನಿಮಗೆ ಹಿಂದು ರಾಷ್ಟ್ರವನ್ನು ನೀಡುತ್ತೇನೆ. ಆದ್ರೆ ನಾನು ರಾಜಕಾರಣಿಯಾಗಲು ಬಯಸುವುದಿಲ್ಲ. ನಾನು ಯಾವುದೇ ಪಕ್ಷವನ್ನು ಹೊಂದುವುದಿಲ್ಲ. ನಾನು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ನಾವು ನಮ್ಮ ಸನಾತನವಾದಿಗಳನ್ನು ಒಗ್ಗೂಡಿಸುವ ಬಗ್ಗೆ ಮಾತ್ರ ಮಾತನಾಡಬೇಕಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!