ನಿಮ್ಮ ಮತ ಬ್ಯಾಂಕ್‌ ರಾಜಕಾರಣದಿಂದ ಒಂದು ದಿನದ ಕಲಾಪಕ್ಕೆ ಕೋಟಿ ಹಣ ಖರ್ಚಾಗುತ್ತಿದೆ: ಕಾಂಗ್ರೆಸ್ ವಿರುದ್ಧ ಹೆಚ್‌.ಡಿ ಕುಮಾರಸ್ವಾಮಿ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸೌಧದಲ್ಲಿ ಕೋಲಾಹಲ ಸೃಷ್ಟಿಸಿ ಅಧಿವೇಶನದ ಸಮಯ ವ್ಯರ್ಥ ಮಾಡಿರುವ ಕಾಂಗ್ರೆಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಎಚ್ ಡಿಕೆ, ಒಂದು ದಿನದ ಕಲಾಪಕ್ಕೆ ಕೋಟಿ ಹಣ ಖರ್ಚಾಗುತ್ತಿದೆ. ಧರಣಿ ಹೆಸರಲ್ಲಿ ಸಮಯ ವ್ಯರ್ಥ ಮಾಡಬೇಡಿ. ನಿಮ್ಮ ಅಜೆಂಡಾ ಏನೇ ಇದ್ದರೂ ಸದನದಿಂದ ಹೊರಗಿಟ್ಟುಕೊಳ್ಳಿ. ಮತ ಬ್ಯಾಂಕ್‌ ರಾಜಕಾರಣಕ್ಕೆ ಸದನ ಹಾಳು ಮಾಡಬೇಡಿ ಎಂದು ಕಾಂಗ್ರೆಸ್ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕೇಸರಿ ವಸ್ತ್ರ ಹಿಂದು ಸಂಸ್ಕೃತಿಯಲ್ಲಿ ಪಾವಿತ್ರ್ಯತೆ ಹೊಂದಿದೆ. ನಮ್ಮ ಪೂರ್ವಜರು ಕೂಡ ಕೇಸರಿ ವಸ್ತ್ರವನ್ನ ಬಳಸುತ್ತಿದ್ದರು. ಹೀಗಾಗಿ ಸಚಿವ ಈಶ್ವರಪ್ಪ ಹೇಳಿಕೆ ಹೇಳಿಕೆ ಖಂಡಿಸಿ ಸದನದಲ್ಲಿ ಕಾಂಗ್ರೆಸ್‌ ಪ್ರತಿಭಟನೆ ಮಾಡುತ್ತಿದೆ. ಈ ಮೂಲಕ ಸಮಯ ವ್ಯರ್ಥ ಮಾಡಲಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿರುವುದಕ್ಕೆ ಬೇಸರವಾಗ್ತಿದೆ.

ವಸ್ತ್ರಸಂಹಿತೆ ವಿಚಾರಣ ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಿದೆ. ನಿಮ್ಮ ಅಜೆಂಡಾ ಏನೇ ಇದ್ದರೂ ಸದನದಿಂದ ಹೊರಗಿಟ್ಟುಕೊಳ್ಳಿ. ನಿಮ್ಮ ಮತ ಬ್ಯಾಂಕ್‌ ರಾಜಕಾರಣಕ್ಕೆ ಸದನ ಹಾಳು ಮಾಡಬೇಡಿ. ಅಕಾಲಿಕ ಮಳೆಯಿಂದ ಜನ ಜಾನುವಾರು ಸಂಕಷ್ಟದಲ್ಲಿದೆ. ಸೂಕ್ತ ಬೆಲೆ ಸಿಗದೆ ರಾಗಿ, ಕಬ್ಬು ಬೆಳೆಗಾರರು ಹೈರಾಣಾಗಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!