ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರವಾಡ ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ಆಯೋಜನೆಗೊಂಡಿದ್ದ 26ನೇ ರಾಷ್ಟ್ರೀಯ ಯುವಜನೋತ್ಸವ ತೆರೆಕಂಡಿದೆ. ಉತ್ಸವದ ಭಾಗವಾಗಿ ಆಯೋಜಿಸಿದ್ದ ಜನಪದ ನೃತ್ಯ ಸ್ಪರ್ಧೆಯಲ್ಲಿ ಪಂಜಾಬ್ ಹಾಗೂ ಜನಪದ ಗೀತೆಯಲ್ಲಿ ಉತ್ತರ ಪ್ರದೇಶ ತಂಡ ಪ್ರಥಮ ಸ್ಥಾನಕ್ಕೆ ಭಾಜನವಾಗಿವೆ.
ಉಳಿದಂತೆ ಜನಪದ ನೃತ್ಯದಲ್ಲಿ ಗುಜರಾತ ದ್ವಿತೀಯ, ಕೇರಳ ತೃತೀಯ ಸ್ಥಾನ ಹಾಗೂ ಜನಪದ ಗೀತೆಯಲ್ಲಿ ಆಸ್ಸಾಂ ದ್ವಿತೀಯ, ಕರ್ನಾಟಕ ತಂಡ ತೃತೀಯ ಸ್ಥಾನ ಪಡೆದುಕೊಂಡಿವೆ. ವಿಜೇತರಿಗೆ ಕ್ರಮವಾಗಿ ಪ್ರಥಮ 1.50 ಲಕ್ಷ, ದ್ವಿತೀಯ 1 ಲಕ್ಷ ಹಾಗೂ ತೃತೀಯ 75 ಸಾವಿರ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗಿದೆ.