ಶೌಚಾಲಯದಲ್ಲೇ ರಾತ್ರಿ ಕಳೆದ ಚಿರತೆ: ಸೆರೆಗೆ ಮಾಡಿಗುಂಜಿ ಗ್ರಾಮಸ್ಥರ ಆಗ್ರಹ

ಹೊಸದಿಗಂತ ವರದಿ ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಾಡಿಗುಂಜಿ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳಿಂದ ಚಿರತೆಯೊಂದು ಸತತವಾಗಿ ಪ್ರತ್ಯಕ್ಷವಾಗುತ್ತಿದ್ದು, ಸ್ಥಳೀಯ ಗ್ರಾಮಸ್ಥರು ತೀವ್ರ ಆತಂಕ ಹಾಗೂ ಭೀತಿಯ ನೆರಳಿನಲ್ಲಿ ಕಾಲ ಕಳೆಯುವಂತಾಗಿದೆ. ನಿನ್ನೆ ಶನಿವಾರ ರಾತ್ರಿ ಗ್ರಾಮದ ಪ್ರಸಾದ್ ಘಾಡಿ ಎಂಬುವರ ಮನೆಯ ಶೌಚಾಲಯದೊಳಗೆ ನುಗ್ಗಿದ ಚಿರತೆ, ರಾತ್ರಿ ಪೂರ್ತಿ ಅಲ್ಲೇ ಅಡಗಿ ಕುಳಿತಿತ್ತು. ಬೆಳಿಗ್ಗೆ ಮನೆಯವರು ಶೌಚಾಲಯದತ್ತ ಹೋದಾಗ ಏಕಾಏಕಿ ಚಿರತೆ ಪ್ರತ್ಯಕ್ಷವಾಗಿದ್ದು, ಕ್ಷಣಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿದ್ದವರು ಸದ್ದು ಗದ್ದಲ … Continue reading ಶೌಚಾಲಯದಲ್ಲೇ ರಾತ್ರಿ ಕಳೆದ ಚಿರತೆ: ಸೆರೆಗೆ ಮಾಡಿಗುಂಜಿ ಗ್ರಾಮಸ್ಥರ ಆಗ್ರಹ