ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ನಲ್ಲಿ ಭಾರೀ ಮಳೆಯಾಗುತ್ತಿದ್ದು, 0 ಜನರು ಸಾವನ್ನಪ್ಪಿದ್ದಾರೆ. 1988ರ ಬಳಿಕ ರಾಜ್ಯ ಈ ಮಟ್ಟಿಗಿನ ಮಳೆ ಪ್ರವಾಹ ಕಂಡಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪಟಿಯಾಲ ಮತ್ತು ರೂಪ್ನಗರ್ ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರೆದಿದ್ದು, ಗ್ರಾಮಸ್ಥರು ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ಸೆಪ್ಟಂಬರ್ 7ರ ವರೆಗೆ ಬಂದ್ ಮಾಡಲಾಗಿದೆ.
ನೀರಿನ ನಿರಂತರ ಹರಿವಿನಿಂದಾಗಿ ಬಾಕ್ರಾ ಅಣೆಕಟ್ಟೆ 1,677.84 ಅಡಿ ನೀರಿನ ಹರಿವು ದಾಖಲಾಗಿದೆ. ಒಳಹರಿವಿನ ಮಟ್ಟ 86,822 ಕ್ಯೂಸೆಕ್ ಇದ್ದು, ಹೊರ ಹರಿವು 65,042 ಕ್ಯೂಸೆಕ್ ಇದೆ. ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಅಣೆಕಟ್ಟೆಗೆ ಹೆಚ್ಚಿನ ನೀರಿನ ಹರಿವು ಆಗುತ್ತಿದ್ದು, ನಂಗಲ್ ಗ್ರಾಮ ಮುಳುಗಡೆ ಆಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ನದಿ ದಂಡೆ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಹಾಗೂ ಶ್ರೀ ಆನಂದಪುರ ಸಾಹಿಬ್ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಅಥವಾ ಪರಿಹಾರ ಶಿಬಿರಗಳಿಗೆ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಲಾಗಿದೆ. ಅವರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಪಂಜಾಬ್ ಸರ್ಕಾರವು ಅವರೊಂದಿಗೆ ದೃಢವಾಗಿ ನಿಲ್ಲುಲಿದೆ ಎಂದು ಪಂಜಾಬ್ ಕ್ಯಾಬಿನೆಟ್ ಸಚಿವ ಹರ್ಜೋತ್ ಬೈನ್ಸ್ ತಿಳಿಸಿದರು.