Wednesday, October 22, 2025

ಹೈಕಮಾಂಡ್ ಹೇಳಿದ್ರೆ ನಾನು ಸಚಿವ ಸ್ಥಾನ ಬಿಡೋಕೆ ರೆಡಿ: ದಿನೇಶ್ ಗುಂಡೂರಾವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈಕಮಾಂಡ್ ನಿಂದ ಸೂಚನೆ ಬಂದರೆ ತಮ್ಮ ಸಚಿವ ಸ್ಥಾನವನ್ನು ಬಿಡಲು ಸಿದ್ಧ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಪುಟ ಪುನರ್ ರಚನೆಯ ವಿಚಾರ ಸದ್ಯಕ್ಕೆ ಚರ್ಚಿಸಲ್ಪಟ್ಟಿಲ್ಲ. ಮುಖ್ಯಮಂತ್ರಿ ಸೋಮವಾರ ರಾತ್ರಿ ನಡೆಸಿದ ಔತಣಕೂಟದಲ್ಲಿ ಈ ವಿಷಯ ಎಲ್ಲೂ ಉಲ್ಲೇಖವಾಗಿಲ್ಲ. ಎಲ್ಲಾ ಸಚಿವರು ತಮ್ಮ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿಯು ಸೂಚನೆ ನೀಡಿರುವುದೇ ಸತ್ಯ’ ಎಂದು ಅವರು ತಿಳಿಸಿದರು.

ಆರ್‌ಎಸ್ಎಸ್ ಸಂಬಂಧದ ನಿಷೇಧದ ಬಗ್ಗೆ ಕೇಳಿದ ಪ್ರಶ್ನೆಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸುವುದಿಲ್ಲ ಎಂದರಾದರೂ, ಸರ್ಕಾರಿ ಶಾಲೆಗಳ ಆವರಣಗಳಲ್ಲಿ ಯಾವುದೇ ಸಂಘಟನೆ ಚಟುವಟಿಕೆ ನಡೆಯಬಾರದು ಎಂಬುದರಲ್ಲಿ ತಮ್ಮ ಬೆಂಬಲವಿದೆ ಎಂದು ತಿಳಿಸಿದ್ದಾರೆ. ಅವರು ಈ ನಿಷೇಧ ಸರಿಯಾದ ಕ್ರಮವಾಗಿದೆ ಎಂದು ಗಮನ ಹೇಳಿದ್ದಾರೆ.

ಮುಖ್ಯಮಂತ್ರಿಗಳ ಬದಲಾವಣೆಯ ಕುರಿತು ವಿಚಾರಿಸಿದಾಗ, ಸದ್ಯ ಉತ್ತಮ ಸಿಎಂ ಇರುವ ಹಿನ್ನೆಲೆಯಲ್ಲಿ ಮತ್ತೊಬ್ಬರನ್ನು ನೇಮಿಸುವ ಬಗ್ಗೆ ಯಾವುದೇ ಚರ್ಚೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.

error: Content is protected !!