ದೈವ ಅನುಕರಣೆ ಪ್ರಕರಣ: ಮತ್ತೊಮ್ಮೆ ಕ್ಷಮಾಪಣೆ ಕೇಳೋದಕ್ಕೆ ರಣವೀರ್ ಸಿಂಗ್ ರೆಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಾವುಂಡಿ ದೈವವನ್ನು ಅನುಕರಿಸಿದ ಪ್ರಕರಣದಲ್ಲಿ ನಟ ರಣವೀರ್ ಸಿಂಗ್ ವಿರುದ್ಧ ನಡೆಯುತ್ತಿರುವ ವಿಚಾರಣೆ ಏಪ್ರಿಲ್ 10ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದಿದ್ದು, ಅವರ ಪರ ವಕೀಲರು ಮಹತ್ವದ ಹೊಸ ಹೇಳಿಕೆಯನ್ನು ಸಲ್ಲಿಸಿದ್ದಾರೆ. ಹಿಂದಿನ ಕ್ಷಮಾಪಣೆಯ ಬಗ್ಗೆ ಉದ್ಭವಿಸಿದ್ದ ಅನುಮಾನಗಳನ್ನು ನಿವಾರಿಸಲು ಪರಿಷ್ಕೃತ ಅಫಿಡವಿಟ್ ಸಲ್ಲಿಸಲು ರಣವೀರ್ ಸಿಂಗ್ ಸಿದ್ಧರಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ರಣವೀರ್ ಪರ ವಕೀಲ ಸಜನ್ ಪೂವಯ್ಯ ಅವರು, ಈ ಬಾರಿ ಸಲ್ಲಿಸಲಾಗುವ ಅಫಿಡವಿಟ್‌ನಲ್ಲಿ ಸ್ಪಷ್ಟ ಮತ್ತು ಪ್ರಾಮಾಣಿಕ ಕ್ಷಮೆಯಾಚನೆ ಇರಲಿದೆ. … Continue reading ದೈವ ಅನುಕರಣೆ ಪ್ರಕರಣ: ಮತ್ತೊಮ್ಮೆ ಕ್ಷಮಾಪಣೆ ಕೇಳೋದಕ್ಕೆ ರಣವೀರ್ ಸಿಂಗ್ ರೆಡಿ