ಕಾಸರಗೋಡಿನಲ್ಲಿ ಮುಂದುವರಿದ ಕಡಲಾರ್ಭಟ: ಸಂಕಷ್ಟದಲ್ಲಿ 88ಕ್ಕೂ ಅಧಿಕ ಕುಟುಂಬ, 325ಕ್ಕೂ ಹೆಚ್ಚು ಜನರ ಸ್ಥಳಾಂತರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಸರಗೋಡು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗಿದ್ದರೂ, ಸಮುದ್ರದ ಅಬ್ಬರ ಮಾತ್ರ ಇನ್ನೂ ತಗ್ಗಿಲ್ಲ. ಕುಂಬಳೆ, ಮಂಜೇಶ್ವರ ಹಾಗೂ ಉಪ್ಪಳ ಕರಾವಳಿ ಭಾಗಗಳಲ್ಲಿ ಕಡಲಕೊರೆತ ತೀವ್ರಗೊಂಡಿದ್ದು, ಕರಾವಳಿ ನಿವಾಸಿಗಳು ಭೀತಿಯಲ್ಲಿದ್ದಾರೆ. ಹಲವೆಡೆ ಸಮುದ್ರದ ನೀರು ತೀರವನ್ನು ಕೊರೆದು ಮುಂದೆ ಸಾಗುತ್ತಿದ್ದು, ಇಲ್ಲಿ ಹತ್ತಕ್ಕೂ ಹೆಚ್ಚು ಮನೆಗಳು ಅಪಾಯದ ಅಂಚಿನಲ್ಲಿವೆ. ಉಪ್ಪಳದ ಶಾರದಾ ನಗರ ಪ್ರದೇಶದಲ್ಲಿ ಒಂದು ಮನೆ ಸಂಪೂರ್ಣವಾಗಿ ಸಮುದ್ರ ಪಾಲಾಗಿದ್ದು, ಸಮೀಪದ ಇನ್ನೂ ಮೂರು ಮನೆಗಳು ಯಾವುದೇ ಕ್ಷಣದಲ್ಲಿ ಕುಸಿಯುವ ಸ್ಥಿತಿಯಲ್ಲಿವೆ. … Continue reading ಕಾಸರಗೋಡಿನಲ್ಲಿ ಮುಂದುವರಿದ ಕಡಲಾರ್ಭಟ: ಸಂಕಷ್ಟದಲ್ಲಿ 88ಕ್ಕೂ ಅಧಿಕ ಕುಟುಂಬ, 325ಕ್ಕೂ ಹೆಚ್ಚು ಜನರ ಸ್ಥಳಾಂತರ