ಪಿಎ ಹ*ತ್ಯೆ ರಾಜಕೀಯ ಕಾರಣಗಳಿಂದ ನಡೆದ ಸಂಚು: ಸುವೇಂದು ಅಧಿಕಾರಿ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿರುವ ಘಟನೆಗೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ ಪೂರ್ವಯೋಜಿತ ದಾಳಿ ಎಂದು ಹೇಳಿರುವ ಅವರು, ಇದು ಕೇವಲ ವೈಯಕ್ತಿಕ ದ್ವೇಷದ ಕೃತ್ಯವಲ್ಲ, ರಾಜಕೀಯ ಕಾರಣಗಳಿಂದ ನಡೆದ ಸಂಚು ಎಂದು ಆರೋಪಿಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಯಿಂದ ನಿವಾಸಕ್ಕೆ ಸಾಗಿಸುವ ವೇಳೆ ಮಾತನಾಡಿದ ಸುವೇಂದು, ರಥ್ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದುದೇ ಅವರ ಏಕೈಕ ‘ತಪ್ಪು’ ಎಂದು ಹೇಳಿದ್ದಾರೆ. … Continue reading ಪಿಎ ಹ*ತ್ಯೆ ರಾಜಕೀಯ ಕಾರಣಗಳಿಂದ ನಡೆದ ಸಂಚು: ಸುವೇಂದು ಅಧಿಕಾರಿ ಆರೋಪ