March 25, 2026
Wednesday, March 25, 2026
spot_img

PCAನಿಂದ ಯುವರಾಜ್–ಹರ್ಮನ್‌ಪ್ರೀತ್ ಗೆ ಸನ್ಮಾನ: ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು ಮುಲ್ಲನ್‌ಪುರ ಮೈದಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಲ್ಲನ್‌ಪುರದ ಮಹಾರಾಜ ಯಾದವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎರಡನೇ T20 ಪಂದ್ಯಕ್ಕೂ ಮುನ್ನ, ಮೈದಾನವೇ ಒಂದು ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು.

ಮೊದಲ ಬಾರಿಗೆ ಅಂತಾರಾಷ್ಟ್ರೀಯ T20 ಆಯೋಜಿಸಿದ ಈ ವೇದಿಕೆ, ಪಂದ್ಯ ಶುರುವಾಗುವ ಮೊದಲು ಭಾರತದ ಕ್ರಿಕೆಟ್‌ ಇತಿಹಾಸಕ್ಕೆ ಮಹತ್ವದ ಕೊಡುಗೆ ನೀಡಿದ ಯುವರಾಜ್ ಸಿಂಗ್ ಮತ್ತು ಹರ್ಮನ್‌ಪ್ರೀತ್ ಕೌರ್ ಅವರನ್ನು ಸನ್ಮಾನಲಾಯಿತು. ಇಬ್ಬರ ಹೆಸರಿನ ಸ್ಟ್ಯಾಂಡ್‌ಗಳನ್ನು ಅಧಿಕೃತವಾಗಿ ಅನಾವರಣಗೊಳಿಸುವ ಮೂಲಕ ಪಂಜಾಬ್ ಸರ್ಕಾರ ನಾಗರಿಕ ಗೌರವ ನೀಡಿತು. ಯುವರಾಜ್ ಸಿಂಗ್‌ಗೆ ಇದು ಅವರ ಹುಟ್ಟುಹಬ್ಬದ ಮುನ್ನಾದಿನದ ವಿಶೇಷ ಉಡುಗೊರೆಯಾಯಿತು.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಮಹಿಳಾ ವಿಶ್ವಕಪ್ ಗೆದ್ದ ಹರ್ಮನ್‌ಪ್ರೀತ್, ಅಮನ್‌ಜೋತ್ ಕೌರ್ ಮತ್ತು ಹರ್ಲೀನ್ ಡಿಯೋಲ್ ಸೇರಿದಂತೆ ವಿಶ್ವಕಪ್ ತಾರೆಗಳನ್ನು ವೇದಿಕೆಯಲ್ಲಿ ಸನ್ಮಾನಿಸಿದರು. ಇದೇ ವೇಳೆ ಯುವರಾಜ್ ಸಿಂಗ್ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಜೊತೆಯೂ ಹೃದಯಸ್ಪರ್ಶಿ ಕ್ಷಣ ಹಂಚಿಕೊಂಡರು.

2007ರ T20 ವಿಶ್ವಕಪ್ ಮತ್ತು ಈ ವರ್ಷ ಏಕದಿನ ವಿಶ್ವಕಪ್ ಜಯಗಳಲ್ಲಿ ಮಹತ್ವದ ಪಾತ್ರ ವಹಿಸಿದ ಈ ದಿಗ್ಗಜರ ಮತ್ತೆ ಸೇರುವಿಕೆ ಅಭಿಮಾನಿಗಳಿಗೆ ಸಂತೋಷ ತಂದಿತು. ಪಂದ್ಯಕ್ಕೂ ಮೊದಲು ಮೈದಾನದಲ್ಲಿ ಕ್ರಿಕೆಟ್‌ನ ಹಳೆಯ ನೆನಪುಗಳು ಮತ್ತು ಹೊಸ ಸಂಭ್ರಮ ಒಂದೇ ವೇದಿಕೆಯಲ್ಲಿ ಕಂಡವು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !