March 23, 2026
Monday, March 23, 2026
spot_img

ದಕ್ಷಿಣ ಕನ್ನಡದತ್ತ ಹೊರಟ ಕುಂದಾಪುರದ ಕಲಾ ವೈಭವ: ಕುಕ್ಕೆ ಕ್ಷೇತ್ರದಲ್ಲಿ ಬೆಳ್ಳಿ ರಥೋತ್ಸವ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉಡುಪಿಯಿಂದ ಭವ್ಯವಾದ ಬೆಳ್ಳಿಯ ರಥವನ್ನು ಸಮರ್ಪಣೆ ಮಾಡಲಾಗಿದೆ.

ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿರುವ ಶಿಲ್ಪಕಲಾ ಕೇಂದ್ರದಲ್ಲಿ ಈ ಅದ್ಭುತ ರಥವನ್ನು ರಚಿಸಲಾಗಿದ್ದು, ಸುಳ್ಯದ ಕೆವಿಜಿ ವಿದ್ಯಾಸಂಸ್ಥೆಯು ಈ ರಥವನ್ನು ಕುಕ್ಕೆ ಕ್ಷೇತ್ರಕ್ಕೆ ಕಾಣಿಕೆಯಾಗಿ ನೀಡಿದೆ.

ರಥದ ವಿಶೇಷತೆಗಳು:

ತೂಕ: 110 ಕೆ.ಜಿ ಶುದ್ಧ ಬೆಳ್ಳಿ.
ಎತ್ತರ: 14 ಅಡಿ.
ನಿರ್ಮಾತೃಗಳು: ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜ ಗೋಪಾಲಾಚಾರ್ಯರು.

ಇಂದು ಕೋಟೇಶ್ವರದಿಂದ ಮೆರವಣಿಗೆಯ ಮೂಲಕ ರಥವನ್ನು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆಗೆದುಕೊಂಡು ಹೋಗಲಾಯಿತು. ರಥವು ದಾರಿಯುದ್ದಕ್ಕೂ ಸಾಗುತ್ತಿದ್ದ ಪ್ರಮುಖ ಕ್ಷೇತ್ರಗಳು ಮತ್ತು ಜಂಕ್ಷನ್‌ಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ, ರಥವನ್ನು ಸ್ವಾಗತಿಸಿದರು.

ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬೆಳ್ಳಿ ರಥವನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಂಡು ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸೇರಿದಂತೆ ನೂರಾರು ಭಕ್ತರು ಸೇರಿ ಮಂಗಳೂರಿಗೆ ರಥವನ್ನು ಬೀಳ್ಕೊಟ್ಟರು. ಈ ಬೆಳ್ಳಿಯ ರಥ ಇನ್ನು ಮುಂದೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಧಾರ್ಮಿಕ ಕೈಂಕರ್ಯಗಳಲ್ಲಿ ಬಳಕೆಯಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !