March 22, 2026
Sunday, March 22, 2026
spot_img

ಸರ್ಕಾರಿ ಹುದ್ದೆ ಭರ್ತಿಗೆ ಆಗ್ರಹಿಸಿ ಸಿಡಿದೆದ್ದ ಯುವಜನತೆ: ಧಾರವಾಡದಲ್ಲಿ ಬಿಗುವಿನ ವಾತಾವರಣ


ಹೊಸ ದಿಗಂತ ವರದಿ, ಧಾರವಾಡ:

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ನಡೆದ ಹೋರಾಟದಲ್ಲಿ ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದ್ದು, ರ‍್ಯಾಲಿಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದ ಹಿನ್ನಲೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪೊಲೀಸರು ಜಯನಗರ ಬಳಿ ಹೋರಾಟಗಾರರನ್ನು ತಡೆಡಿದ್ದು, ಇದರಿಂದ ಆಕಾಂಕ್ಷಿಗಳ ಹಸನೆ ಕಟ್ಟೆ ಒಡೆದು, ಚೀರಾಟ, ಕೂಗಾಟ ನಡೆಸಿದ ಘಟನೆ ನಡೆಯಿತು.

ಹೋರಾಟಕ್ಕೆ ವಿಧಾನಸಭೆ ವಿರೋಧ ಪಕ್ಷದ ಮಾಯಕ ಆರ್. ಅಶೋಕ ಬೆಂಬಲ ಸೂಚಿಸಿದರು. ಜಯನಗರ ಕ್ರಾಸ್ ಹತ್ತಿರ ಬಂದ ಅವರ ಕಾರು ಮುತ್ತಿದ ಬಹುತೇಕ ಹೋರಾಟಗಾರರು ಘೋಷಣೆ ಕೂಗಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !