July 31, 2026
Friday, July 31, 2026
spot_img

ಮೆದುಳು ಜ್ವರ ಬಾಧಿತ ಯುವತಿಯ ಚಿಕಿತ್ಸೆಗೆ ಬೇಕಿದೆ 20 ಲಕ್ಷ: ವಿಧವೆ ತಾಯಿಯ ಆಧಾರ ದೀಕ್ಷಾಳ ಉಳಿಸಲು ಬೇಕಿದೆ ದಾನಿಗಳ ಮಮಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕಲ್ಲಾಪು ಪೆರ್ಮನ್ನೂರಿನ ನಿವಾಸಿ ಕು. ದೀಕ್ಷಾ ಕೊಟ್ಟಾರಿ ಕುತ್ತಾರು (3೦) ಅವರು ಮೆದುಳು ಜ್ವರದಿಂದ ಬಳಲುತ್ತಿದ್ದು, ಆಕೆಯ ಚಿಕಿತ್ಸೆಗೆ ಇಪ್ಪತ್ತು ಲಕ್ಷ ರೂಪಾಯಿಗಳ ಅಗತ್ಯವಿದೆ. ಸಮಾಜದ ಸಹೃದಯಿ ದಾನಿಗಳಿಂದ ಸಹಕಾರವನ್ನು ಯಾಚಿಸಲಾಗಿದೆ.

ಮೆದುಳು ಜ್ವರದಿಂದ ಗಂಭೀರ ಸ್ಥಿತಿಯಲ್ಲಿದ್ದ ದೀಕ್ಷಳನ್ನು ಕಳೆದ ವಾರ (ಜು.24) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳೂರಿನ ಕೆಎಮ್ ಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದೀಕ್ಷಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ಸುಮಾರು ಇಪ್ಪತ್ತು ಲಕ್ಷ ರೂಪಾಯಿಗಳಷ್ಟು ವೆಚ್ಚ ತಗುಲಲಿದೆಯೆಂದು ವೈದ್ಯರು ತಿಳಿಸಿದ್ದಾರೆ.

ದೀಕ್ಷಾ ಪೋಷಕರಿಗೆ ಏಕೈಕ ಪುತ್ರಿಯಾಗಿದ್ದು, ಆಕೆಯ ತಂದೆಯು ಸಾವನ್ನಪ್ಪಿದ್ದು, ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಖಾಸಗಿ ಉದ್ಯೋಗದಲ್ಲಿದ್ದ ದೀಕ್ಷಾ ಅವಿವಾಹಿತಳಾಗಿದ್ದು ತನ್ನ ದುಡಿಮೆಯಿಂದಲೇ ತಾಯಿಯನ್ನ ಸಾಕುತ್ತಿದ್ದಳು. ತಾಯಿಗೆ ಆಧಾರವಾಗಿದ್ದ ಮಗಳು ಇದೀಗ ಆಸ್ಪತ್ರೆಯ ಐಸಿಯುನಲ್ಲಿ ಸಾವಿನೊಂದಿಗೆ ಸೆಣಸಾಟ ನಡೆಸುತ್ತಿದ್ದಾಳೆ. ದೀಕ್ಷಳ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ಭರಿಸಲು ಆಕೆಯ ಅಶಕ್ತ ತಾಯಿಗಂತೂ ಸಾಧ್ಯವೇ ಇಲ್ಲದಂತಾಗಿದೆ. ಹನಿ ಹನಿ ಸೇರಿ ಹಳ್ಳ ಎಂಬಂತೆ ಸಮಾಜದ ಉದಾರ ಮನಸ್ಸಿನ ದಾನಿಗಳು ಕೊಡುವ ಒಂದೊಂದು ರೂಪಾಯಿಯೂ ದೀಕ್ಷಳ ಜೀವ ಉಳಿಸಲು ಸಹಾಯವಾಗಬಹುದು.

ದೀಕ್ಷಾಳ ಚಿಕಿತ್ಸೆಗೆ ಸಹಾಯ ಮಾಡಲಿಚ್ಚಿಸುವವರು ಕೆಳಕಂಡ ಬ್ಯಾಂಕ್ ಖಾತೆ ಅಥವಾ ಗೂಗಲ್ ಪೇ, ಯುಪಿಐ ಸ್ಕ್ಯಾನರ್ ಮುಖಾಂತರ ತಮ್ಮ ಅಮೂಲ್ಯ ದೇಣಿಗೆ ಕಳುಹಿಸಬಹುದಾಗಿದೆ.

ಹೀಗೆ ನೆರವಾಗಿ…

BANK Of BARODA
AC No: 71390100013606 IFSC:BARB0VJULLA (fifth character is zero)
Google pay num : 7899391012

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !