ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಕಿ ಇರುವ ಇ-ಖಾತಾ ದಾಖಲೆ ನೀಡಲು ಯಾದಗಿರಿ ನಗರಸಭೆ ಅಧಿಕಾರಿ ಹಣದ ಬೇಡಿಕೆ ಇಟ್ಟ ದೂರಿನಡಿ ಲೋಕಾ ಬಲೆಗೆ ಬಿಲ್ ಕಲೆಕ್ಟರ್ ಬಿದ್ದಿರುವ ಘಟನೆ ಯಾದಗಿರಿ ನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ನಗರಸಭೆಯ ಬಿಲ್ ಕಲೆಕ್ಟರ್ ನರಸಪ್ಪ ಮಣಿಕ್ಕಪ್ಪ ಬಾಕಿ ಉಳಿದ ಇ-ಖಾತಾ ದಾಖಲೆ ನೀಡಲು 8000 ಹಣದ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 5000 ಹಣವನ್ನು ಪೋನ್ ಪೇ ಮೂಲಕ ತೆಗೆದುಕೊಂಡಿದ್ದಾನೆ. ಈ ಕುರಿತು ದೂರಾದಾರ ಶಶಿಕುಮಾರ ಜ್ಞಾನಮಿತ್ರ ಲೋಕಾಯುಕ್ತರಿಗೆ ದೂರು ನೀಡಿದ್ದಾನೆ.
ಲೋಕಾಯುಕ್ತ ಎಸ್ಪಿ, ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಪಿಐಗಳಾದ ಸಂಗಮೇಶ, ಸಿದ್ದರಾಮ ಬಳೂರ್ಗಿ ಸೇರಿದಂತೆ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದ್ದಾರೆ.