July 21, 2026
Tuesday, July 21, 2026
spot_img

ಬದರಿನಾಥ ಸಮೀಪ ಭೀಕರ ಹಿಮಕುಸಿತ: ನೈಸರ್ಗಿಕ ವಿಸ್ಮಯಕ್ಕೆ ಸಾಕ್ಷಿಯಾದ ಕುಬೇರ್ ಭಂಡಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಬದರಿನಾಥ ಸಮೀಪದ ಕುಬೇರ್ ಭಂಡಾರ್ ಹಿಮನದಿಯಲ್ಲಿ ಭಾರಿ ಪ್ರಮಾಣದ ಹಿಮಪಾತ ಸಂಭವಿಸಿದೆ. ಈ ಬೃಹತ್ ಹಿಮದ ರಾಶಿಯು ಕಾಂಚನಜುಂಗಾ ನದಿಯ ಮೇಲ್ಭಾಗದವರೆಗೆ ತಲುಪಿದೆ. ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ರೀತಿಯ ಸಾವು-ನೋವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ದೃಢಪಡಿಸಿದ್ದಾರೆ.

ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದ ಕಿಶೋರ್ ಜೋಶಿ ಅವರು ಈ ಕುರಿತು ಮಾಹಿತಿ ನೀಡಿದ್ದು, ಹಿಮಪಾತವು ಬದರಿನಾಥ ರಾಷ್ಟ್ರೀಯ ಹೆದ್ದಾರಿಯಿಂದ ನೂರಾರು ಮೀಟರ್ ಎತ್ತರದಲ್ಲಿ ಸಂಭವಿಸಿದೆ. “ಈ ಪ್ರದೇಶದಲ್ಲಿ ಹಿಮಕುಸಿತವು ಒಂದು ಸಾಮಾನ್ಯ ನೈಸರ್ಗಿಕ ವಿದ್ಯಮಾನವಾಗಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕುಬೇರ್ ಭಂಡಾರ್ ಹಿಮನದಿಯ ಒಂದು ಭಾಗವು ಬೃಹತ್ ಶಬ್ದದೊಂದಿಗೆ ಕುಸಿದು ಬಿದ್ದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಕಾಂಚನಜುಂಗಾದ ಬಲ ಮತ್ತು ಎಡ ಭಾಗಗಳಲ್ಲಿ ಗ್ಲೇಸಿಯರ್ ಕರಗುವಿಕೆ ಮತ್ತು ಕುಸಿಯುವಿಕೆಯ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಈ ದೃಶ್ಯಗಳನ್ನು ಪ್ರವಾಸಿಗರು ಸಾಮಾನ್ಯವಾಗಿ ವೀಕ್ಷಿಸುತ್ತಾರೆ ಎಂದು ವರದಿ ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !