Saturday, November 8, 2025

ಗುಂಡಿ ಮುಚ್ಚೋಕೆ ನಾನೇ ದುಡ್ಡು ಕೊಡ್ತೀನಿ, ಪ್ಲೀಸ್‌ ರಸ್ತೆ ಸರಿ ಮಾಡಿ ಎಂದ ನಿವಾಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ರಸ್ತೆ ಬಗ್ಗೆ ದಿನಕ್ಕೊಂದು ಪೋಸ್ಟ್ಗಳು ವೈರಲ್​ ಆಗುತ್ತ ಇದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ವೊಂದು ವೈರಲ್​ ಆಗಿದೆ.

ನಗರದ ನಿವಾಸಿಯೊಬ್ಬರು ಬೆಂಗಳೂರಿನ ರಸ್ತೆ ಗುಂಡಿಗಳಿಂದ ತಮ್ಮ ಕಾರನ್ನು ರಿಪೇರಿ ಮಾಡಲು 23 ಸಾವಿರ ರೂ. ಖರ್ಚಾಗಿದೆ ಎಂದು ಪೋಸ್ಟ್​​ನ್ನು ಹಂಚಿಕೊಂಡಿದ್ದಾರೆ. ಇದೀಗ ಈ ಸ್ಟೋರಿ ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆ ಕಾರಣವಾಗಿದೆ.

ಕಾರು ಸರ್ವಿಸ್ ಮಾಡಿದ ಕೇವಲ ಒಂದು ವಾರದ ನಂತರ ಗುಂಡಿಗಳಿಂದ ಮತ್ತೆ ಕಾರು ರಿಪೇರಿಗೆ ಬಂದಿದೆ. ಕಾರು ರಿಪೇರಿ ಮಾಡಲು 23 ಸಾವಿರ ರೂ. ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ .

ಕಾರಿನ ಸಸ್ಪೆನ್ಷನ್ ಅನ್ನು ಬದಲಾಯಿಸಲು ಹಾಗೂ ಕಾರು ಕಂಡೀಷನ್​​​ಗೆ ಬರಲು 23 ಸಾವಿರ ರೂ. ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ.

ಪ್ರತಿ ದಿನ ಔಟರ್ ರಿಂಗ್ ರಸ್ತೆ ಮತ್ತು ವರ್ತೂರು ರಸ್ತೆಯಾಗಿ ಪ್ರಯಾಣಿಸುತ್ತೇನೆ. ಅಲ್ಲಿರುವ ಗುಂಡಿಗಳಿಂದ ಕಾರು ಸಂಪೂರ್ಣ ಹಾಳಾಗಿದೆ. ಇದರ ಜತೆಗೆ ಎಕ್ಸಾಸ್ಟ್ ಪೈಪ್​​ಗೂ ಹಾನಿಯಾಗಿದೆ. ಇದಕ್ಕೆ 5 ಸಾವಿರ ರೂ. ಖರ್ಚು ಮಾಡಿದ್ದೇನೆ. ಬೇಕಾದರೆ ರಸ್ತೆ ರಿಪೇರಿ ಮಾಡಲು ಹಣ ನೀಡುತ್ತೇನೆ. ಆದರೆ ಯಾವುದೇ ತೆರಿಗೆ ಕಟ್ಟುವುದಿಲ್ಲ ಎಂದು ಹೇಳಿದ್ದಾರೆ.

error: Content is protected !!