January15, 2026
Thursday, January 15, 2026
spot_img

ಮನೆಯಂಗಳದ ಮುಂದೆ ಆಟವಾಡುತ್ತಿದ್ದ ಕಂದಮ್ಮನ ಪ್ರಾಣ ತೆಗೆದ ಕೆಕೆಆರ್‌ಟಿಸಿ ಬಸ್

ಹೊಸದಿಗಂತ ಯಾದಗಿರಿ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಮನ ಕಲಕುವ ದುರಂತವೊಂದು ಸಂಭವಿಸಿದೆ. ಕೆಕೆಆರ್‌ಟಿಸಿ (KKRTC) ಬಸ್ ಹರಿದು ಕೇವಲ ಎರಡು ವರ್ಷದ ಮುಗ್ಧ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಕೂಡಲಗಿ ಗ್ರಾಮದಿಂದ ಸುರಪುರ ಕಡೆಗೆ ಸಾಗುತ್ತಿದ್ದ ಕೆಕೆಆರ್‌ಟಿಸಿ ಬಸ್, ಗ್ರಾಮದ ರಸ್ತೆಯಲ್ಲಿ ನಡೆದಿರುವಾಗ, ಮಗು ತನ್ನ ಮನೆಯಂಗಳದ ಸಮೀಪ ಆಟವಾಡುತ್ತಾ ಇದ್ದಕ್ಕಿದ್ದಂತೆ ರಸ್ತೆಯ ಕಡೆಗೆ ಬಂದಿದೆ. ಈ ಅನಿರೀಕ್ಷಿತ ಕ್ಷಣದಲ್ಲಿ ಬಸ್ ಚಾಲಕನಿಗೆ ನಿಯಂತ್ರಣ ಸಾಧಿಸಲು ಸಾಧ್ಯವಾಗದೇ ಅವಘಡ ಸಂಭವಿಸಿದೆ. ಬಸ್‌ನ ಎರಡು ಚಕ್ರಗಳು ಬಾಲಕಿಯ ಮೇಲೆ ಹರಿದ ಪರಿಣಾಮ, ಮಗುವಿನ ದೇಹವು ಸಂಪೂರ್ಣ ಛಿದ್ರವಾಗಿದೆ.

ಈ ಘಟನೆಯು ಮಂಗಳೂರು ಗ್ರಾಮದಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿದೆ. ವಿಷಯ ತಿಳಿದ ಕೂಡಲೇ ಕೆಂಭಾವಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಮತ್ತು ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.

Most Read

error: Content is protected !!