September 10, 2026
Thursday, September 10, 2026
spot_img

ಪ್ರಧಾನಿ ಮೋದಿಯನ್ನು ಮುಗಿಸಿದರೆ ಮಾತ್ರ ತಮಿಳುನಾಡು ಉದ್ದಾರ: ನಾಲಿಗೆ ಹರಿಬಿಟ್ಟ ಡಿಎಂಕೆ ನಾಯಕ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಗಿಸಿದರೆ ಮಾತ್ರ ತಮಿಳುನಾಡು ಉದ್ದಾರವಾಗಲಿದೆ ಎಂದು ಡಿಎಂಕೆ ತೆಂಕಸಿ ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಜೆ. ಜಯಬಾಲನ್ ಬುಧವಾರ ನಾಲಿಗೆ ಹರಿಬಿಟ್ಟಿದ್ದು, ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ತೆಂಕಸಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಜಯಬಾಲನ್ ಅವರ ಭಾಷಣವನ್ನು ಭಾರತೀಯ ಜನತಾ ಪಕ್ಷ (BJP) ತೀವ್ರವಾಗಿ ಖಂಡಿಸಿದೆ.

ಜಯಬಾಲನ್, “(ಪ್ರಧಾನಿ) ಮೋದಿ ನಿಮ್ಮ ಮತಗಳನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ. ಅವನು ಮತ್ತೊಬ್ಬ ನರಕಾಸುರ (ಹಿಂದೂ ಪುರಾಣದ ರಾಕ್ಷಸ). ಅವನನ್ನು ಮುಗಿಸಿದರೆ ಮಾತ್ರ ತಮಿಳುನಾಡು ಸುಧಾರಿಸುತ್ತದೆ” ಎಂದು ಹೇಳಿದ್ದಾರೆ.

ಡಿಎಂಕೆ ನಾಯಕರಾದ ಶಂಕರನ್ಕೋವಿಲ್ ಶಾಸಕ ಇ. ರಾಜಾ ಮತ್ತು ತೆಂಕಸಿ ಸಂಸದೆ ರಾಣಿ ಶ್ರೀಕುಮಾರ್ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡದ ಜಯಬಾಲನ್‌
ಈ ವಿಚಾರವಾಗಿ ಜಯಬಾಲನ್ ಅವರನ್ನು ಸಂಪರ್ಕಿಸಿದಾಗ, ಅವರು ವಿವಾದದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಡಿಎಂಕೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಬಿಜೆಪಿ ಆಕ್ರೋಶ
ಡಿಎಂಕೆ ನಾಯಕನ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್, ಮೋದಿಗೆ ಜೀವ ಬೆದರಿಕೆ ಹಾಕಿರುವ ಡಿಎಂಕೆ ನಾಯಕನನ್ನು ರಾಜ್ಯ ಸರ್ಕಾರ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, ಜಯಬಾಲನ್ ಅವರ ಭಾಷಣವು ಡಿಎಂಕೆ ಆಡಳಿತದಲ್ಲಿ ಬೆಳೆಯುತ್ತಿರುವ “ದ್ವೇಷ ತುಂಬಿದ ಉಗ್ರವಾದ”ವನ್ನು ಪ್ರತಿಬಿಂಬಿಸುತ್ತದೆ ಮತ್ತು ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು: “ಇದು ಡಿಎಂಕೆ ಆಡಳಿತದಲ್ಲಿ ಬೆಳೆಯುತ್ತಿರುವ ಕಾನೂನುಬಾಹಿರತೆ, ಇಲ್ಲಿ ನಾಯಕರು ಪ್ರಧಾನಿಯ ವಿರುದ್ಧ ಕೊಲೆ ಬೆದರಿಕೆ ಹಾಕಲು ಧೈರ್ಯ ಮಾಡುತ್ತಾರೆ.” ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !