Saturday, November 22, 2025

ಶಬರಿಮಲೆ| ಸ್ಪಾಟ್ ಟಿಕೆಟ್ ಬುಕಿಂಗ್ ಸಂಖ್ಯೆ 5 ಸಾವಿರಕ್ಕೆ ಸೀಮಿತ, ದಿನಕ್ಕೆ 75 ಸಾವಿರ ಭಕ್ತರಿಗಷ್ಟೇ ದರುಶನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಬರಿಮಲೆ ದೇವಾಲಯದಲ್ಲಿ ಮಂಡಲ ಮಕರವಿಳಕ್ಕು ಯಾತ್ರೆ ಆರಂಭವಾಗಿದೆ. ಭಕ್ತರ ಒಳಹರಿವು ಹೆಚ್ಚಾಗಿದ್ದು, ಕಾಲ್ತುಳಿತ ಉಂಟಾಗಿದೆ.

ಈ ನಿಟ್ಟಿನಲ್ಲಿ ಕೇರಳ ಹೈಕೋರ್ಟ್ ಸೂಚನೆಯೊಂದನ್ನು ನೀಡಿದ್ದು, ಸ್ಪಾಟ್​ ಬುಕಿಂಗ್ 5 ಸಾವಿರಕ್ಕೆ ಸೀಮಿತಗೊಳಿಸಲಾಗಿದೆ. ಅಷ್ಟೇ ಅಲ್ಲದೆ ದಿನದ ದರ್ಶನ ಮಿತಿಯನ್ನು 75 ಸಾವಿರಕ್ಕೆ ಇಳಿಸಿದೆ.

ನ್ಯಾಯಮೂರ್ತಿ ರಾಜಾ ವಿಜಯರಾಘವನ್ ಮತ್ತು ನ್ಯಾಯಮೂರ್ತಿ ಕೆ.ವಿ. ಜಯಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಸ್ಪಾಟ್ ಬುಕಿಂಗ್ ಮೂಲಕ ತೀರ್ಥಯಾತ್ರೆಗೆ ಭೇಟಿ ನೀಡಿದವರ ಸಂಖ್ಯೆ ದಿನಕ್ಕೆ 30,000 ದಾಟಿದೆ ಎಂದು ಗಮನಿಸಿತು, ಇದು ಹಿಂದಿನ 20,000 ಮಿತಿಯನ್ನು ಮೀರಿದೆ.

ಬುಧವಾರ (ನವೆಂಬರ್ 19) ನ್ಯಾಯಾಲಯಕ್ಕೆ ತಿಳಿಸಲಾದ ಮಾಹಿತಿಯ ಪ್ರಕಾರ, ಸುಮಾರು 1 ಲಕ್ಷ ಯಾತ್ರಿಕರ ಒಳಹರಿವು ಇತ್ತು, ಅವರಲ್ಲಿ ಹಲವರು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಆಗಮಿಸಿದ್ದರು. ನಂತರ ಹೈಕೋರ್ಟ್​ ಕೆಲವು ನಿರ್ದೇಶನಗಳನ್ನು ನೀಡಿದೆ.

ಎರುಮೇಲಿ, ನೀಲಕ್ಕಲ್, ಪಂಬಾ, ವಂಡಿಪೆರಿಯಾರ್ ಮತ್ತು ಚೆಂಗನ್ನೂರ್ ರೈಲು ನಿಲ್ದಾಣಗಳಲ್ಲಿ ನಡೆಯುತ್ತಿರುವ ಒಟ್ಟು ಸ್ಪಾಟ್ ಬುಕಿಂಗ್‌ಗಳ ಸಂಖ್ಯೆ ಮೇಲೆ ತಿಳಿಸಿದ ಮಿತಿಯನ್ನು ಮೀರದಂತೆ ನೋಡಿಕೊಳ್ಳಲು ಅದು ತಿರುವಾಂಕೂರು ದೇವಸ್ವಂ ಮಂಡಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತು.

error: Content is protected !!