Monday, November 24, 2025

ವಿಷಗಾಳಿಗೆ ದೆಹಲಿ ಮಂದಿ ಗಡಗಡ, ಗಾಡಿ ಬಿಟ್ಟು ಮೆಟ್ರೋದಲ್ಲಿ ಪ್ರಯಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೆಹಲಿ – ಎನ್‌ಸಿಆರ್‌ನಲ್ಲಿ ವಾಯುಗುಣಮಟ್ಟ ದಿನದಿಂದ ದಿನಕ್ಕೆ ತೀವ್ರ ಕಳೆಪೆಯಾಗುತ್ತಿದೆ. ಉಸಿರಾಡುವ ಗಾಳಿ ವಿಷವಾಗುತ್ತಿರುವುದು ಜನರಿಗೆ ಅನಾರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಇದರಿಂದ ಅಲ್ಲಿನ ಸರ್ಕಾರ ವಾಹನ ಸಂಚಾರ ವ್ಯವಸ್ಥೆಯಲ್ಲಿ ಕಠಿಣ ಕ್ರಮ ಜರುಗಿಸಿದೆ.

ವಾಯು ಮಾಲಿನ್ಯವು ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದ್ದರೂ, ದೆಹಲಿ ಮೆಟ್ರೋ ಲಕ್ಷಾಂತರ ಜನರಿಗೆ ಅತ್ಯಂತ ವಿಶ್ವಾಸಾರ್ಹ ಮತ್ತು ಸುರಕ್ಷಿತ ಸಾರಿಗೆ ವಿಧಾನವಾಗಿದೆ. ದೆಹಲಿ ಮೆಟ್ರೋ ರೈಲು ನಿಗಮ ಪ್ರಕಾರ, ಕೆಲಸದ ದಿನಗಳಲ್ಲಿ ಪ್ರತಿದಿನ 75 ರಿಂದ 78 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಮಾಲಿನ್ಯ, ಸಂಚಾರ ದಟ್ಟಣೆ ಮತ್ತು ಹೆಚ್ಚುತ್ತಿರುವ ಶೀತದ ನಡುವೆ ಜನರು ಮೆಟ್ರೋಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದು ತಿಳಿಸಿದೆ.

ಡಿಎಂಆರ್​ಸಿ ಅಧಿಕಾರಿಗಳ ಪ್ರಕಾರ, ವಾರದ ಕೆಲಸದ ದಿನಗಳಲ್ಲಿ ಪ್ರತಿದಿನ 75 ರಿಂದ 78 ಲಕ್ಷ ಜನರು ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ವಾರಾಂತ್ಯಗಳಲ್ಲಿ ಈ ಸಂಖ್ಯೆ ಹೆಚ್ಚೂ ಕಡಿಮೆ ಇಷ್ಟೇ ಇರುತ್ತದೆ. ಇದು ಮೆಟ್ರೋದಲ್ಲಿ ಸಾರ್ವಜನಿಕರ ನಂಬಿಕೆ ಬೆಳೆಯುತ್ತಿದೆ ಎಂಬುದಕ್ಕೆ ಸಾಕ್ಷಿ. ಮಾಲಿನ್ಯ ಹೆಚ್ಚಳದಿಂದಾಗಿ ಜನರು ಖಾಸಗಿ ವಾಹನಗಳಿಗಿಂತ ಮೆಟ್ರೋದಂತಹ ಸುರಕ್ಷಿತ ಆಯ್ಕೆಗಳನ್ನು ಹೆಚ್ಚಾಗಿ ಆರಿಸಿಕೊಳ್ಳುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಇದರ ಜೊತೆಗೆ, ಸಂಚಾರ ದಟ್ಟಣೆ, ಬದಲಾಗುತ್ತಿರುವ ಹವಾಮಾನದಿಂದ ಉಂಟಾಗುತ್ತಿರುವ ಚಳಿಯೂ ಕಾರಣವಾಗಿದೆ.

ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಪೂರೈಸಲು ದೆಹಲಿ ಮೆಟ್ರೋ ರೈಲು ನಿಗಮವು ತನ್ನ ಕಾರ್ಯಾಚರಣೆಯನ್ನು ಹೆಚ್ಚಿಸಿದೆ. ಕೆಲಸದ ದಿನಗಳಲ್ಲಿ ಎಲ್ಲ ಮಾರ್ಗಗಳಲ್ಲಿ ಪ್ರತಿದಿನ ಸುಮಾರು 4,400 ರೈಲುಗಳು ಸಂಚರಿಸುತ್ತವೆ. ಇದು ದಟ್ಟಣೆಯನ್ನು ಕಡಿಮೆ ಮಾಡುವ ಮೂಲಕ ಪ್ರಯಾಣಿಕರಿಗೆ ಪ್ರಯೋಜನ ನೀಡುತ್ತದೆ. ಅಗತ್ಯವಿದ್ದರೆ, ಪ್ರತಿ ಮಾರ್ಗದಲ್ಲಿ ಟ್ರಿಪ್​​ಗಳನ್ನು ಹೆಚ್ಚಿಸಲಾಗುವುದು ಎಂದು ದೆಹಲಿ ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.

error: Content is protected !!