April 11, 2026
Saturday, April 11, 2026
spot_img

ಮಲೇಷ್ಯಾದಿಂದ ಚೆನ್ನೈಗೆ ಬಂದ ದಳಪತಿ ವಿಜಯ್: ಏರ್ ಪೋರ್ಟ್ ನಲ್ಲಿ ಮುಗ್ಗರಿಸಿ ಬಿದ್ದ ನಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲೇಷ್ಯಾದಲ್ಲಿ ತಮ್ಮ ಮುಂಬರುವ ಚಿತ್ರ ‘ಜನ ನಾಯಗನ್’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಚೆನೈಗೆ ಹಿಂತಿರುಗುತ್ತಿದ್ದ ವೇಳೆ ನಟ–ರಾಜಕಾರಣಿ ದಳಪತಿ ವಿಜಯ್ ಅವರು ವಿಮಾನ ನಿಲ್ದಾಣದಲ್ಲಿ ಎಡವಿ ಬಿದ್ದ ಘಟನೆ ನಡೆದಿದೆ. ಮಲೇಷ್ಯಾದಿಂದ ನಿರ್ಗಮನ ಪ್ರಕ್ರಿಯೆ ಮುಗಿಸಿ ಹೊರಬರುತ್ತಿದ್ದಾಗ, ಅವರನ್ನು ನೋಡಲು ಜಮಾಯಿಸಿದ್ದ ಭಾರೀ ಅಭಿಮಾನಿಗಳ ಗುಂಪಿನ ಮಧ್ಯೆ ಈ ಘಟನೆ ಸಂಭವಿಸಿದೆ.

ವಿಮಾನ ನಿಲ್ದಾಣದ ನಿರ್ಗಮನ ಪ್ರದೇಶದಿಂದ ತಮ್ಮ ಕಾರಿನತ್ತ ನಡೆದುಕೊಂಡು ಹೋಗುತ್ತಿದ್ದ ವೇಳೆ, ಜನಸಮೂಹದ ನೂಕುನುಗ್ಗಲಿನಿಂದ ವಿಜಯ್ ಸಮತೋಲನ ಕಳೆದುಕೊಂಡು ನೆಲಕ್ಕೆ ಬಿದ್ದರು. ತಕ್ಷಣವೇ ಭದ್ರತಾ ಸಿಬ್ಬಂದಿ ಹಾಗೂ ಬೆಂಗಾವಲು ಪಡೆ ಮಧ್ಯ ಪ್ರವೇಶಿಸಿ ಅವರನ್ನು ಎತ್ತಿ, ಯಾವುದೇ ತೊಂದರೆ ಆಗದಂತೆ ವಾಹನ ಹತ್ತಲು ಸಹಾಯ ಮಾಡಿದರು. ಈ ಘಟನೆಯಿಂದ ಕೆಲ ಕ್ಷಣಗಳ ಕಾಲ ಅಲ್ಲಿದ್ದ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು. ಆದರೆ ವಿಜಯ್ ಅವರಿಗೆ ಗಂಭೀರ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !