Friday, January 2, 2026

ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಭೇಟಿಯಾದ ರಾಜ್ಯಸಭೆ ಉಪಸಭಾಪತಿ

ಹೊಸ ದಿಗಂತ ವರದಿ,ಮುಂಡಗೋಡ:

ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರನ್ನು ರಾಜ್ಯಸಭೆಯ ಉಪಸಭಾಪತಿ ಹರಿವಂಶ ನಾರಾಯಣ ಸಿಂಗ್ ಕುಟುಂಬ ಸಮೇತರಾಗಿ ಶುಕ್ರವಾರ ಭೇಟಿಯಾಗಿ ಆಶೀರ್ವಾದ ಪಡೆದರು.

ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.6ರ ಡ್ರೆಪುಂಗ್ ಗೋಮಾಂಗ್ ಬೌದ್ಧ ಮಂದಿರದಲ್ಲಿ ವಾಸ್ತವ್ಯ ಹೂಡಿರುವ ದಲೈಲಾಮಾ ಅವರನ್ನು, ಪ್ರತಿದಿನ ದೇಶ, ವಿದೇಶದ ಗಣ್ಯರು, ಬೌದ್ಧ ಅನುಯಾಯಿಗಳು, ಸಚಿವರು, ಶಾಸಕರು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದಾರೆ.

error: Content is protected !!