ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಕ್ರಾಂತಿ ಹಬ್ಬ ಮುಗಿಯುತ್ತಿದ್ದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಪ್ರವಾಸ ಖಚಿತವಾಗಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ತಮ್ಮ ಭೇಟಿಯನ್ನು ಜನವರಿ 27ರ ನಂತರಕ್ಕೆ ಮುಂದೂಡಿದ್ದಾರೆ. ಹೈಕಮಾಂಡ್ ಭೇಟಿಗೆ ರಾಹುಲ್ ಗಾಂಧಿ ಅವರ ಲಭ್ಯತೆ ಮುಖ್ಯವಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜ. 22ರಿಂದ 27ರವರೆಗೆ ರಾಹುಲ್ ಗಾಂಧಿ ಅವರು ಪ್ರವಾಸದಲ್ಲಿ ಇರಲಿದ್ದಾರೆ. ಅವರು ದೆಹಲಿಗೆ ಮರಳಿದ ನಂತರವಷ್ಟೇ ಅವರನ್ನು ಭೇಟಿ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ರಾಜ್ಯ ಬಜೆಟ್ ಮಂಡನೆಯ ಸಿದ್ಧತೆಗಳ ಬಗ್ಗೆ ಹೈಕಮಾಂಡ್ನಿಂದ ಅಗತ್ಯ ಸಲಹೆ ಹಾಗೂ ಅನುಮತಿ ಪಡೆಯುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ.
ಸಿಎಂ ಕಾರ್ಯಕ್ರಮಗಳ ಪಟ್ಟಿ:
ಜ. 18, 19: ಮೈಸೂರು ಜಿಲ್ಲಾ ಪ್ರವಾಸದಲ್ಲಿ ಸಿಎಂ ಬ್ಯುಸಿ.
ಜ. 20, 21: ವಿಶೇಷ ಅಧಿವೇಶನದ ಸಿದ್ಧತೆಗಳ ಬಗ್ಗೆ ಹೆಚ್ಚಿನ ಗಮನ.
ಜ. 27ರ ನಂತರ: ದೆಹಲಿ ಪ್ರವಾಸ ಮತ್ತು ಹೈಕಮಾಂಡ್ ನಾಯಕರೊಂದಿಗೆ ಚರ್ಚೆ.


