ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮಹಾ ಸಂಗ್ರಾಮಕ್ಕೆ ಅದ್ಧೂರಿ ತೆರೆ ಬೀಳಲಿದೆ. ಇಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಆರಂಭವಾದ ಫಿನಾಲೆ ಸಂಚಿಕೆಯಲ್ಲಿ, ಕಿಚ್ಚ ಸುದೀಪ್ ಅವರು ಮೊದಲ ಎಲಿಮಿನೇಷನ್ ಘೋಷಿಸಿದರು. ಟಾಪ್ 6 ಹಂತ ತಲುಪಿದ್ದ ಸ್ಪರ್ಧಿಗಳ ಪೈಕಿ ಧನುಷ್ ಅವರು ಅತಿ ಕಡಿಮೆ ಮತಗಳನ್ನು ಪಡೆದು ಮನೆಯಿಂದ ಹೊರಬಂದಿದ್ದಾರೆ.

ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ಧನುಷ್, ಬಿಗ್ ಬಾಸ್ ಮನೆಯಲ್ಲಿ ತಮ್ಮ ಅತ್ಯುತ್ತಮ ಟಾಸ್ಕ್ ಪ್ರದರ್ಶನದ ಮೂಲಕವೇ ಟಾಪ್ 6 ತಲುಪಿದ್ದರು. ಆದರೆ, ವಿವಾದಗಳಿಂದ ದೂರ ಉಳಿಯುವ ಅವರ ‘ಸೈಲೆಂಟ್’ ಸ್ವಭಾವವೇ ಅವರಿಗೆ ಹಿನ್ನಡೆಯಾಯಿತೇ ಎಂಬ ಚರ್ಚೆ ಶುರುವಾಗಿದೆ.
ಧನುಷ್ ಅವರಿಗೆ ಒಟ್ಟು 1 ಕೋಟಿ 27 ಲಕ್ಷ ಮತಗಳು ಲಭಿಸಿವೆ.
ಧನುಷ್ ಅವರ ನಿರ್ಗಮನದ ನಂತರ ಈಗ ಕಿರೀಟಕ್ಕಾಗಿ ಪೈಪೋಟಿ ನಡೆಸುತ್ತಿರುವ ಐವರು ಸ್ಪರ್ಧಿಗಳೆಂದರೆ:
ಗಿಲ್ಲಿ ನಟ
ರಕ್ಷಿತಾ ಶೆಟ್ಟಿ
ಅಶ್ವಿನಿ ಗೌಡ
ಕಾವ್ಯಾ ಶೈವ
ರಘು
ಇಂದು ರಾತ್ರಿ ವೇಳೆಗೆ ಈ ಐವರಲ್ಲಿ ಯಾರು ಸೀಸನ್ 12ರ ಕಪ್ ಎತ್ತಿ ಹಿಡಿಯಲಿದ್ದಾರೆ ಎಂಬ ಸಸ್ಪೆನ್ಸ್ ಅಂತ್ಯವಾಗಲಿದೆ.


