ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯ ವಿಚಾರ ಈಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 3 ರೂಪಾಯಿ ಸುಂಕ ಇಳಿಸಿ, ಡೀಸೆಲ್ ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕಿದೆ.
ಆದರೆ ಸರ್ಕಾರದ ಈ ನಡೆಯನ್ನು ‘ಚುನಾವಣಾ ತಂತ್ರ’ ಎಂದು ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ಇಷ್ಟು ದಿನ ಬೆಲೆ ಏರಿಸಿ ಜನರ ರಕ್ತ ಹೀರಿ, ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸುಂಕ ಕಡಿಮೆ ಮಾಡಿದ್ದಾರೆ. ಕಂಪನಿಯವರು ಕೂಡ ಮನಬಂದಂತೆ ಬೆಲೆ ಏರಿಸುತ್ತಿದ್ದಾರೆ. ಕೇಂದ್ರದ ಈ ನೀತಿಗಳು ನಮ್ಮನ್ನು ಕೊಲೆ ಮಾಡುವಂತಿವೆ” ಎಂದು ಕಟುವಾಗಿ ಆಕ್ಷೇಪಿಸಿದ್ದಾರೆ.



