June 7, 2026
Sunday, June 7, 2026
spot_img

ಪಿತೂರಿಯಿಂದಾಗಿ ಕೈ ಅಧ್ಯಕ್ಷ ಸ್ಥಾನ ಮಿಸ್: ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿದ ಅಶೋಕ್ ಗೆಹ್ಲೋಟ್ ಹೇಳಿಕೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ನನಗೆ ಇನ್ನೇನು ಸಿಗಬೇಕು ಅಷ್ಟರಲ್ಲಿ ಪಿತೂರಿಯಿಂದಾಗಿ ಅಧ್ಯಕ್ಷ ಸ್ಥಾನ ಕೈ ತಪ್ಪುವಂತೆ ಮಾಡಲಾಯಿತು ಎಂದು ರಾಜಸ್ಥಾನ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಪಿತೂರಿಯೊಂದು ತಡೆಯಿತು

ಈ ಕುರಿತು ಜೈಪುರದಲ್ಲಿ ಮಾತನಾಡಿರುವ ಅವರು, ನಾಯಕಿ ಸೋನಿಯಾ ಗಾಂಧಿ ಹಾಗು ಹೈಕಮಾಂಡ್ ನನ್ನನ್ನು ಅಭ್ಯರ್ಥಿಯನ್ನಾಗಿ ನಿರ್ಧರಿಸಿತ್ತು. ನಾನು ಆ ಹುದ್ದೆಯನ್ನು ಗೌರವದ ಸಂಕೇತವೆಂದು ಸ್ವೀಕರಿಸಲು ನಿರ್ಧರಿಸಿದ್ದೆ, ಆದರೆ ಪಿತೂರಿಯೊಂದು ನನ್ನನ್ನು ತಡೆಯಿತು ಎಂದು ಹೇಳಿದರು.

ಪಕ್ಷದ ವೀಕ್ಷಕರನ್ನು ರಾಜಸ್ಥಾನಕ್ಕೆ ಕಳುಹಿಸಿದ ಬಳಿಕ ದೊಡ್ಡ ಪಿತೂರಿ ನಡೆಯಿತು. ನಾನು ಕಾಂಗ್ರೆಸ್​​​ನ ಉನ್ನತ ಹುದ್ದೆ ಏರುವ ಯೋಜನೆ ಕೈತಪ್ಪಿತು. ರಾಜಸ್ಥಾನದ ಸಿಎಂ ಹುದ್ದೆ ತೊರೆಯಲು ಬಯಸದ ಕಾರಣ ಅಧ್ಯಕ್ಷ ಪದವಿಯಿಂದ ಹಿಂದೆ ಸರಿದರು ಎಂದು ಹೇಳಲಾಯಿತು. ಆದರೆ ನಾನು ಹಿಂದೆ ಸರಿಯಲಿಲ್ಲ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !